ಕುಂದಾಪುರ, ಮಾ 26 (DaijiworldNews/HR): ಪುರಸಭಾ ವ್ಯಾಪ್ತಿಯ ಕುಂದಾಪುರ ಶಾಸ್ತ್ರೀ ವೃತ್ತವನ್ನು ನವೀಕರಣಗೊಳಿಸಲಾಗಿದ್ದು, ಲಾಲ್ ಬಹದ್ದೂರ್ ಶಾಸ್ತ್ರೀಯವರ ನೂತನ ಪುತ್ಥಳಿ ಅನಾವರಣ ಕಾರ್ಯಕ್ರಮ ಮಾ.25ರಂದು ನಡೆಯಿತು.
![]( https://daijiworld.ap-south-1.linodeobjects.com/Linode/images3/Arun_250323_kund1.jpg)
![]( https://daijiworld.ap-south-1.linodeobjects.com/Linode/images3/Arun_250323_kund2.jpg)
![]( https://daijiworld.ap-south-1.linodeobjects.com/Linode/images3/Arun_250323_kund3.jpg)
![]( https://daijiworld.ap-south-1.linodeobjects.com/Linode/images3/Arun_250323_kund4.jpg)
![]( https://daijiworld.ap-south-1.linodeobjects.com/Linode/images3/Arun_250323_kund5.jpg)
ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ನವೀಕರಿಸಲಾದ ಶಾಸ್ತ್ರೀವೃತ್ತವನ್ನು ಉದ್ಘಾಟಿಸಿ, ಲಾಲ್ ಬಹದ್ದೂರ್ ಶಾಸ್ತ್ರೀಯವರ ಪುತ್ಥಳಿ ಅನಾವರಣ ಮಾಡಿದರು.
ಇನ್ನು ಉಪಾಧ್ಯಕ್ಷ ಸಂದೀಪ್ ಖಾರ್ವಿ, ಹಿರಿಯ ಸದಸ್ಯರಾದ ಮೋಹನದಾಸ ಶೆಣೈ, ದೇವಕಿ ಸಣ್ಣಯ್ಯ, ಕುಂದಾಪುರ ಪುರಸಭೆಯ ಹಿಂದಿನ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪುರಸಭಾ ಸದಸ್ಯರು ಉಪಸ್ಥಿತರಿದ್ದರು. ಪುರಸಭಾ ಮುಖ್ಯಾಧಿಕಾರಿ ಮಂಜುನಾಥ ಸ್ವಾಗತಿಸಿದರು. ಉಪನ್ಯಾಸಕ ಅಕ್ಷಯ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ನೂತನ ಪುತ್ಥಳಿಯನ್ನು ಚಾರ್ಮಕ್ಕಿ ನಾರಾಯಣ ಶೆಟ್ಟಿ ಟ್ರಸ್ಟ್ ಕೊಡಮಾಡಿತು.