ಪಶ್ಚಿಮ ಬಂಗಾಳ, ಜು. 23 (DaijiworldNews/AK): ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸುಲಭವಲ್ಲ, ಆದರೆ ಕಠಿಣ ಪರಿಶ್ರಮ ಮತ್ತು ದೃಢನಿಶ್ಚಯವು ಯಶಸ್ಸನ್ನು ತರುವುದು ಖಚಿತ. ಇದಕ್ಕೆ ಐಎಎಸ್ ಅಧಿಕಾರಿ ತರುಣಿ ಪಾಂಡೆ ಅವರ ಕಥೆಯೇ ಸ್ಪೂರ್ತಿ.

ಪಶ್ಚಿಮ ಬಂಗಾಳದ ಚಿತ್ತರಂಜನ್ನಲ್ಲಿ ಜನಿಸಿದ ತರುಣಿ ಯಾವಾಗಲೂ ವೈದ್ಯೆಯಾಗುವ ಕನಸು ಕಂಡಿದ್ದರು. ಅವರು ಎಂಬಿಬಿಎಸ್ ಪದವಿಗಾಗಿ ಅಧ್ಯಯನ ಮಾಡಲು ಮುಂದಾದರು, ಆದರೆ ಡೆಂಗ್ಯೂ, ಟೈಫಾಯಿಡ್ ಮತ್ತು ಸೆರೆಬ್ರಲ್ ಮಲೇರಿಯಾ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಎಂಬಿಬಿಎಸ್ ಅಧ್ಯಯನ ಮಾಡುವುದು ಸಾಧ್ಯವಾಗಿಲ್ಲ. ಬಳಿಕ ಅವರು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿಪೂರ್ವ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದರು.
ತರುಣಿ ಐಎಎಸ್ ಅಧಿಕಾರಿಯಾಗುವ ಕನಸು ಕಂಡಿರಲಿಲ್ಲ. ತನ್ನ ಸಹೋದರಿಯ ಪತಿ ಅಕಾಲಿಕ ಮರಣ ಹೊಂದಿದ ನಂತರ ನಾಗರಿಕ ಸೇವೆಗೆ ಸೇರುವ ಆಲೋಚನೆ ಅವಳ ಮನಸ್ಸಿಗೆ ಮೂಡಿತು. ತನ್ನ ಸಹೋದರಿಯೊಂದಿಗೆ ವಿವಿಧ ಸರ್ಕಾರಿ ಕಚೇರಿಗಳಿಗೆ ಪ್ರಯಾಣಿಸಬೇಕಾಯಿತು. ಈ ಪ್ರಯಾಣದ ಸಮಯದಲ್ಲಿ ಸರ್ಕಾರಿ ಕಚೇರಿಗಳ ಆಂತರಿಕ ಕಾರ್ಯಗಳ ಬಗ್ಗೆ ಪರಿಚಯವಾಯಿತು ಮತ್ತು ನಂತರ ನಾಗರಿಕ ಸೇವೆಗೆ ಸೇರಲು ನಿರ್ಧರಿಸಿದರು.
2020 ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆಯನ್ನು ತೆಗೆದುಕೊಳ್ಳಲು ಅವಳು ಯೋಜಿಸಿದ್ದರು ಆದರೆ ನಂತರ ಅವರು ಜೀವನದಲ್ಲಿ ಮತ್ತೊಂದು ಪ್ರಮುಖ ಸವಾಲು ಉದ್ಭವಿಸಿತು. UPSC ಪರೀಕ್ಷೆಗೆ ಕೇವಲ ನಾಲ್ಕು ದಿನಗಳ ಮೊದಲು, ಅವರಿಗೆ COVID-19 ಸೋಂಕು ತಗುಲಿ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. 2021 ರಲ್ಲಿ, ಅವರು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಾದ 32 ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದರು ಮತ್ತು ಅಖಿಲ ಭಾರತ ಮಟ್ಟದಲ್ಲಿ 14 ನೇ ರ್ಯಾಂಕ್ ಗಳಿಸಿದರು. ತರುಣಿಗೆ UPSC ಪರೀಕ್ಷೆಗೆ ತಯಾರಿ ನಡೆಸಲು ಕೇವಲ ಆರು ತಿಂಗಳುಗಳಿದ್ದವು, ಆ ಸಮಯವನ್ನು ಪೂರ್ಣವಾಗಿ ಬಳಸಿಕೊಂಡು IAS ಅಧಿಕಾರಿಯಾದರು.