ನವದೆಹಲಿ, ಜೂ. 30 (DaijiworldNews/AA): ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದಲ್ಲಿ ಮುಸ್ಲಿಂ ಇದ್ದಿದ್ದರೆ ಸರ್ಕಾರವು ಈಗ ಅವನನ್ನು ಎನ್ಕೌಂಟರ್ನಲ್ಲಿ ಗುಂಡಿಕ್ಕಿ ಕೊಲ್ಲುತ್ತಿತ್ತು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, "ರಾಮಮಂದಿರ ಟ್ರಸ್ಟ್ನಲ್ಲಿ ಮುಸ್ಲಿಂ ಇದ್ದಿದ್ದರೆ, ಸರ್ಕಾರವು ಈಗ ಅವನನ್ನು ಎನ್ಕೌಂಟರ್ನಲ್ಲಿ ಗುಂಡಿಕ್ಕಿ ಕೊಂದು ಮನೆಯನ್ನು ನೆಲಸಮ ಮಾಡುತ್ತಿತ್ತು" ಎಂದಿದ್ದಾರೆ.
"ಪ್ರಕರಣದಲ್ಲಿ ಕ್ರಮಕೈಗೊಳ್ಳಲು ಪೊಲೀಸರು ವಿಳಂಬ ಮಾಡುತ್ತಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳನ್ನು ಕಸ್ಟಡಿಗೆ ಪಡೆಯಲು ಪ್ರಯತ್ನಿಸುತ್ತಿಲ್ಲ. ಅವರು ಒಬ್ಬ ಮುಸಲ್ಮಾನನನ್ನು ಟ್ರಸ್ಟ್ನಲ್ಲಿ ಇರಿಸಿಕೊಂಡು, ಅವನ ಎನ್ಕೌಂಟರ್ ಮೂಲಕ ಮತ್ತು ಅವನ ಮನೆಯನ್ನು ಕೆಡವಿ ಪ್ರಕರಣವನ್ನು ಮುಚ್ಚಬೇಕಾಗಿತ್ತು" ಎಂದು ಹೇಳಿದ್ದಾರೆ.