ಬೆಂಗಳೂರು, ಜೂ. 01 (DaijiworldNews/AA): ಕಾಂಗ್ರೆಸ್ನಲ್ಲಿ ಡ್ರೈವರ್ ಬದಲಾಗಿದ್ದಾರೆ ಅಷ್ಟೇ. ಬಸ್ ಮತ್ತು ಎಂಜಿನ್ ಕೆಟ್ಟು ಹೋಗಿದೆ. ಡ್ರೈವರ್ ಬದಲಾದರೇನು? ಕೆಟ್ಟು ಹೋಗಿರೋ ಬಸ್ ಓಡಲು ಸಾಧ್ಯವೇ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಡಿದ ಅವರು, "ಇದು ಕೆಟ್ಟು ಹೋಗಿರೋ ಗಾಡಿ. ಸಿದ್ದರಾಮಯ್ಯ ಅವರು ಕೆಟ್ಟು ಹೋಗಿರೋ ಗಾಡಿ ಡಿಕೆಶಿಗೆ ಕೊಟ್ಟಿದ್ದಾರೆ. ಸಾಲ ಮಾಡಿ ಡಿಸೇಲ್ ಹಾಕಿಸುವ ಬಸ್ ಅನ್ನ ಸಿದ್ದರಾಮಯ್ಯ ಡಿಕೆಶಿಗೆ ಕೊಟ್ಟಿದ್ದಾರೆ" ಎಂದು ತಿಳಿಸಿದ್ದಾರೆ.
"ರಾಜ್ಯದಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ನಾನು ಅಹಿಂದ ನಾಯಕ ಅಂತಿದ್ದರು. ದೇಶದಲ್ಲಿ ನಾನೊಬ್ಬನೇ ಅಹಿಂದ ಸಿಎಂ ಇರೋದು ಅಂತ ಹೇಳ್ತಾ ಇದ್ದರು. ನನ್ನನ್ನ ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲ್ಲ ಅಂತ ಕಾನ್ಫಿಡೆನ್ಸ್ನಲ್ಲಿ ಇದ್ದರು. ರಾಹುಲ್ ಗಾಂಧಿ ಕಿತಾಪತಿಯಿಂದ ಈಗ ಸ್ಥಾನ ಹೋಗಿದೆ" ಎಂದರು.
"ರಾಹುಲ್ ಗಾಂಧಿಯವರ ಪೂಜ್ಯ ತಂದೆ ರಾಜೀವ್ ಗಾಂಧಿ ಅವರು ವೀರೇಂದ್ರ ಪಾಟೀಲ್ರನ್ನ ಕಿತ್ತು ಹಾಕಿದ್ರು. ಇಂದಿರಾ ಗಾಂಧಿ ದೇವರಾಜ್ ಅರಸ್, ಬಂಗಾರಪ್ಪ ಅವರನ್ನ ಕಿತ್ತಾಕಿದ್ರು. ಇದು ಕಾಂಗ್ರೆಸ್ ಕಿತ್ತಾಕಿರೋ ಸಂಸ್ಕೃತಿ. ದೇವರಾಜ್ ಅರಸ್, ಬಂಗಾರಪ್ಪ, ಸಿದ್ದರಾಮಯ್ಯ ಹಿಂದುಳಿದವರು. ಕಾಂಗ್ರೆಸ್ ದೇಶದಲ್ಲಿ ಬ್ಯಾಕ್ ವರ್ಡ್ ಸಮುದಾಯವನ್ನ ಗೋ ಬ್ಯಾಕ್ ಮಾಡ್ತಿದೆ. ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿರೋಧಿ ಆಗಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ನನಗೆ ಇರೋ ಮಾಹಿತಿ ಪ್ರಕಾರ, 3 ತಿಂಗಳು ಅವಕಾಶ ಕೊಡಿ ಎಂದು ಸಿದ್ದರಾಮಯ್ಯ ಭಿಕ್ಷೆ ಬೇಡಿದ್ರು. 3 ತಿಂಗಳು ಅಲ್ಲ 3 ದಿನ ಕೊಡಲ್ಲ ಅಂತ ಹೇಳಿ ಇಳಿಸಿದ್ದಾರೆ. ಇದು ಪಕ್ಕಾ ಮಾಹಿತಿ. ಇನ್ನು ಮುಂದೆ ಕಾಂಗ್ರೆಸ್ ಹಿಂದುಳಿದ ವರ್ಗಗಳ ಚಾಂಪಿಯನ್ ಅಂತ ಕರೆಯಬಾರದು. ಕುರುಬರು ತಿರುಗಿ ಬಿದ್ದಿದ್ದಾರೆ. ಕಾಂಗ್ರೆಸ್ಗೆ ಹಿಂದುಳಿದ ವರ್ಗಗಳ ಜನ ಮುಂದೆ ಪಾಠ ಕಾಲಿಸ್ತಾರೆ" ಎಂದು ಹೇಳಿದ್ದಾರೆ.
"ಸಿಎಂ ಬದಲಾವಣೆ ಆದ್ರೆ ಫೈನಾನ್ಸ್ನಲ್ಲಿ ಇರೋ ಲೆಕ್ಕ ಪತ್ರ ಬದಲಾಗುತ್ತಾ? ನಮ್ಮ ರಾಜ್ಯದ ಸಾಲ 7.54 ಲಕ್ಷ ರೂ. ಕೋಟಿ. ಆದಾಯದಕ್ಕಿಂತ ಸಾಲ ಜಾಸ್ತಿ ಇದೆ. ಸಾಲ ಜಾಸ್ತಿ ಮಾಡಿದ್ದೆ ಸಿದ್ದರಾಮಯ್ಯ. ಬೊಮ್ಮಾಯಿ ಸರ್ ಫ್ಲಸ್ ಬಜೆಟ್ ಮಂಡನೆ ಮಾಡಿದ್ರು. ಈಗ ಸಿದ್ದರಾಮಯ್ಯ ಸಾಲ ಮಾಡಿದ್ದಾರೆ. ಡಿಕೆ ಶಿವಕುಮಾರ್ ಅವರೇ ಈ ಸಾಲ ತೀರಿಸುವವರು ಯಾರು? ಮುಂದಿನ ಪೀಳಿಗೆ ತೀರಿಸಬೇಕಾ? ನೀವೇ ತೀರಿಸ್ತೀರಾ? ಈ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣವಿಲ್ಲ. ನಾವು ಇದ್ದಾಗ 86,000 ಕೋಟಿ ರೂ. ಅಭಿವೃದ್ಧಿಗೆ ಅಂತ ಪ್ರತಿ ವರ್ಷ ಖರ್ಚು ಮಾಡ್ತಾ ಇದ್ವಿ. ಇವರು ಅವೈಜ್ಞಾನಿಕ ಗ್ಯಾರಂಟಿ ತಂದಿದ್ದರಿಂದ ಅಭಿವೃದ್ಧಿಗೆ ಹಣ ಇಲ್ಲದಂತೆ ಆಗಿದೆ. ಬಿಜೆಪಿ ಅವಕಾಶ ಇದ್ದರೂ ಸಾಲ ಪಡೆಯಲಿಲ್ಲ. ನಾವು ಸಂವೃದ್ದಿ ಕರ್ನಾಟಕವನ್ನು ಕಾಂಗ್ರೆಸ್ಗೆ ಕೈಗೆ ಕೊಟ್ಟಿದ್ವಿ. ಆದರೆ ಕಾಂಗ್ರೆಸ್ ಅವರು ಆರ್ಥಿಕತೆ ಹಾಳು ಮಾಡಿದ್ರು. ಆಲಿಬಾಬಾ 40 ಕಳ್ಳರ ರೀತಿ ಹಾಳು ಮಾಡಿದ್ರು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.