ನವದೆಹಲಿ, ಮಾ. 05 (DaijiworldNews/AA): ಮಧ್ಯಪ್ರಾಚ್ಯದಲ್ಲಿ ಏರ್ಪಟ್ಟಿರುವ ಸಂಘರ್ಷವು ಭಾರತದ ಹಿತ್ತಲಿಗೆ ತಲುಪಿದೆ. ಹಿಂದೂ ಮಹಾಸಾಗರದಲ್ಲಿ ಇರಾನಿನ ಯುದ್ಧನೌಕೆ ಮುಳುಗಿದೆ. ಆದ್ರೂ ಪ್ರಧಾನಿ ಏನನ್ನೂ ಹೇಳದೇ ಮೌನವಾಗಿದ್ದಾರೆ ಎಂದು ಹೇಳಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ನಡೆಯನ್ನ ಖಂಡಿಸಿದ್ದಾರೆ.

ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆ ನಡೆಸಿದ ದಾಳಿಗೆ ಇರಾನ್ ಯುದ್ಧನೌಕೆ ಮುಳುಗಿ 87 ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, "ಜಗತ್ತು ಅಸ್ಥಿರ ಹಂತ ತಲುಪಿದೆ, ಸಮುದ್ರದ ಬಿರುಗಾಳಿ ನಮ್ಮ ಮುಂದಿದೆ. ಭಾರತದ ತೈಲ ಸರಬರಾಜಿನ ಸ್ಥಿತಿ ಅಪಾಯದಲ್ಲಿದೆ. ಏಕೆಂದ್ರೆ ನಮ್ಮ ಆಮದುಗಳಲ್ಲಿ 40% ಗಿಂತಲೂ ಹೆಚ್ಚು ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತವೆ. ಎಲ್ಪಿಜಿ, ಎಲ್ಎನ್ಜಿ ಪರಿಸ್ಥಿತಿಯಂತೂ ಇನ್ನೂ ಕೆಟ್ಟದಾಗಿದೆ" ಎಂದು ತಿಳಿಸಿದ್ದಾರೆ.
"ಸಂಘರ್ಷವು ಈಗಾಗಲೇ ನಮ್ಮ ಮನೆ ಹಿತ್ತಲು ತಲುಪಿದೆ. ಇರಾನ್ ಯುದ್ಧನೌಕೆ ಹಿಂದೂ ಮಹಾಸಾಗರದಲ್ಲಿ ಮುಳಿದ್ರೂ ಪ್ರಧಾನಿ ಏನನ್ನೂ ಹೇಳಿಲ್ಲ. ಇಂತಹ ಕ್ಷಣದಲ್ಲಿ ನಮಗೆ ಚಕ್ರದಲ್ಲಿ ಬಲವಾದ ಕೈ ಬೇಕು. ಆದರೆ ಭಾರತವು ಭಾರತವು ನಮ್ಮ ಕಾರ್ಯತಂತ್ರದ ಸ್ವಾಯತ್ತತೆಯನ್ನ ಬಿಟ್ಟುಕೊಟ್ಟ ಹಾಗೂ ರಾಜಿ ಮಾಡಿಕೊಂಡ ಪ್ರಧಾನಿಯನ್ನ ಹೊಂದಿದೆ ಎಂದು ಮೋದಿ ವಿರುದ್ಧ ಆಕ್ಷೇಪ ಹೊರಹಾಕಿದ್ದಾರೆ" ಎಂದು ಪೋಸ್ಟ್ ಮಾಡಿದ್ದಾರೆ.