ನವದೆಹಲಿ, ಡಿ. 11 (DaijiworldNews/AA): "ಅಮಿತ್ ಶಾ ಅವರು ಮಾನಸಿಕವಾಗಿ ಒತ್ತಡದಲ್ಲಿದ್ದಾರೆ. ಅದು ಸಂಸತ್ತಿನಲ್ಲಿ ಪ್ರದರ್ಶನವಾಗಿದೆ. ಇಡೀ ದೇಶವೇ ಅದನ್ನು ನೋಡಿದೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

"ಮತ ಕಳ್ಳತನದ ಬಗೆಗಿನ ತಮ್ಮ ಪತ್ರಿಕಾಗೋಷ್ಠಿಯ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಗೃಹ ಸಚಿವ ಅಮಿತ್ ಶಾ ಅವರಿಗೆ ಬಹಿರಂಗವಾಗಿಯೇ ಕೇಳಿಕೊಂಡೆ. ಆದರೆ, ಯಾವುದೇ ಉತ್ತರ ಸಿಗಲಿಲ್ಲ. ಅವರು ತಪ್ಪು ಭಾಷೆಯನ್ನು ಬಳಸಿದ್ದಾರೆ, ಅವರ ಕೈಗಳು ನಡುಗುತ್ತಿದ್ದವು, ನೀವು ಇದನ್ನೆಲ್ಲ ನೋಡಿರಬಹುದು" ಎಂದು ಅವರು ಹೇಳಿದ್ದಾರೆ
"ನಾನು ಹೇಳಿರುವ ವಿಷಯಗಳಿಗೆ ಅವರು ಯಾವುದೇ ಪುರಾವೆ ನೀಡಿಲ್ಲ. ನಾವು ಅದನ್ನು ಪತ್ರಿಕಾಗೋಷ್ಠಿಗಳಲ್ಲಿ ಸಾರ್ವಜನಿಕವಾಗಿ ಹೇಳಿದ್ದೇವೆ. ನನ್ನ ಪತ್ರಿಕಾಗೋಷ್ಠಿಯಲ್ಲಿನ ವಿಚಾರಗಳನ್ನು ಸಂಸತ್ತಿನಲ್ಲಿ ಚರ್ಚಿಸಲು ಅವಕಾಶ ನೀಡಿ ಎಂದು ನಾನು ಅವರಿಗೆ ನೇರವಾಗಿ ಸವಾಲು ಹಾಕಿದೆ. ಆದರೆ, ಉತ್ತರ ಸಿಗಲಿಲ್ಲ. ವಾಸ್ತವ ನಿಮಗೆ ತಿಳಿದಿದೆ" ಎಂದರು.