ಬೆಂಗಳೂರು, ಅ. 07 (DaijiworldNews/AA): ಸಿಎಂ ಸ್ಥಾನ ಕುರಿತ ಹೇಳಿಕೆಗಳಿಂದ ಗೊಂದಲ ಆಗ್ತಿರುವುದನ್ನು ಹೈಕಮಾಂಡ್ ಬ್ರೇಕ್ ಹಾಕಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, "ಗೊಂದಲ ಬಗೆಹರಿಸಬೇಕೆಂಬ ಸತೀಶ್ ಜಾರಕಿಹೊಳಿ ಅವರು ಹೇಳಿರೋದು ಸರಿ ಇದೆ. ನಿತ್ಯ ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡ್ತಿದ್ದಾರೆ. ಇದನ್ನು ಬಗೆಹರಿಸಬೇಕು. ಇದನ್ನು ಬಗೆಹರಿಸುವ ಕೆಲಸ ಹೈಕಮಾಂಡ್ ಮಾಡುತ್ತೆ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತದೆ. ಯಾವ ಸಂದರ್ಭದಲ್ಲಿ ಯಾವ ಔಷಧ ಕೊಡಬೇಕು ಅಂತ ಹೈಕಮಾಂಡ್ಗೆ ಗೊತ್ತಿದೆ. ಆ ಔಷಧ ಹೈಕಮಾಂಡ್ ಕೊಡುತ್ತೆ. ಗೊಂದಲಗಳನ್ನು ಬಗೆಹರಿಸಬೇಕು ಅಂತ ನಾನೂ ಹೈಕಮಾಂಡ್ಗೆ ಒತ್ತಾಯಿಸ್ತೇನೆ" ಎಂದು ತಿಳಿಸಿದ್ದಾರೆ.
ಬಿಹಾರ ಚುನಾವಣೆ ಬಳಿಕ ಕಾಂಗ್ರೆಸ್ನಲ್ಲಿ ಬದಲಾವಣೆಗಳಾಗಲಿವೆ ಎಂಬ ವಿಚಾರವಾಗಿ, "ಬದಲಾವಣೆಗಳನ್ನು ಮಾಡಲು ಚುನಾವಣೆಯೇ ಆಗಬೇಕು ಅಂತೇನಿಲ್ಲ. ಬದಲಾವಣೆ ಮಾಡೋದಿದ್ರೆ ಹೈಕಮಾಂಡ್ನವ್ರು ಮಾಡ್ತಾರೆ. ಸಿಎಂಗೆ ಆಗಲೀ ಡಿಸಿಎಂಗೆ ಆಗಲೀ ಎಲ್ರಿಗೂ ಜವಾಬ್ದಾರಿ ಇದೆ. ಒಂದು ಕಡೆ ಪ್ರವಾಹ ಆಗ್ತಿದೆ, ಆ ಕಡೆ ಗಮನ ಕೊಡಬೇಕು. ಸಮಸ್ಯೆಗಳನ್ನು ಬಗೆಹರಿಸುವತ್ತ ನಾವು ಗಮನ ಕೊಡಬೇಕು. ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತದೆ. ಆದ್ರೆ ಈಗ ನಮ್ಮ ಆಧ್ಯತೆ ಏನು ಅಂತ ನೋಡಬೇಕು" ಎಂದು ಹೇಳಿದರು.