ಬೆಂಗಳೂರು,ಜೂ. 05 (DaijiworldNews/AK): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 11 ಮಂದಿ ಬಲಿಯಾಗಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿರುವ ಇದೀಗ ಯುಡಿಆರ್ ಬದಲಿಗೆ ಎಫ್ಐಆರ್ ದಾಖಲಿಸಿದ್ದಾರೆ.

ಆರ್ಸಿಬಿ ಫ್ರಾಂಚೈಸಿ, ಕೆಎಸ್ಸಿಎ ಮತ್ತು ಡಿಎನ್ಎ ಇವೆಂಟ್ ಮ್ಯಾನೇನ್ಮೆಂಟ್ ಸಂಸ್ಥೆ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರ್ಸಿಬಿಯನ್ನು ಆರೋಪಿ ನಂ. 1, ಡಿಎನ್ಎ ಎಂಟರ್ಟೈನ್ಮೆಂಟ್ ಅನ್ನು ಆರೋಪಿ ನಂ. 2 ಮತ್ತು ಕೆಎಸ್ಸಿಎ ಅನ್ನು ಆರೋಪಿ ನಂ. 3 ಎಂದು ಹೆಸರಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 105 (ಮಾನವ ನರಹತ್ಯೆ), BNS 106, 118(1), 118(2), 190, 132, 125A,125(B) ಅಡಿಯಲ್ಲಿ ಕೇಸ್ ದಾಖಲು ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಯುಡಿಆರ್ ಅಂದ್ರೆ, ಅನ್ ನ್ಯಾಚುರಲ್ ಡೆತ್ ರಿಪೋರ್ಟ್ (ಅಸಹಜ ಸಾವಿನ ವರದಿ) ಈ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ ಎಫ್ಐಆರ್ ದಾಖಲಿಸಿದೆ. ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು, ಹೊಣೆಗಾರಿಕೆ ಮತ್ತು ತಡೆಗಟ್ಟುವ ಕ್ರಮಗಳನ್ನು ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದೆ.
ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ವಿವರವಾದ ಸ್ಥಿತಿ ವರದಿಗಳಿಗಾಗಿ ಕಾಯುತ್ತಿದೆ. ಬೆಂಗಳೂರು ನಗರ ಉಪ ಆಯುಕ್ತ ಜಿ. ಜಗದೀಶ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್ ತನಿಖೆಗೆ ಸರ್ಕಾರ ಆದೇಶಿಸಿದ್ದು, ಅವರು ಜೂನ್ 11 ರಿಂದ 13 ರವರೆಗೆ ಎಲ್ಲಾ ಪಕ್ಷಗಳಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದ್ದಾರೆ ಮತ್ತು ಸಾರ್ವಜನಿಕ ವಿಚಾರಣೆಗಳನ್ನು ನಡೆಸಲಿದ್ದಾರೆ.
ಕ್ರೀಡಾಂಗಣದ 45,000 ಸಾಮರ್ಥ್ಯಕ್ಕಿಂತ 2.5 ಲಕ್ಷ ಜನಸಂದಣಿಯ ನಡುವೆ ಗೇಟ್ ಸಂಖ್ಯೆ 12 ಅನ್ನು ಇದ್ದಕ್ಕಿದ್ದಂತೆ ತೆರೆದಾಗ ಕಾಲ್ತುಳಿತ ಸಂಭವಿಸಿದೆ. 18 ರಿಂದ 20 ರವರೆಗೆ ಗೇಟ್ಗಳ ಬಳಿ ನೆರೆದಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಹತ್ತಿರದ ಆಸ್ಪತ್ರೆಗಳಾದ ಬೌರಿಂಗ್, ವೈದೇಹಿ ಮತ್ತು ಮಣಿಪಾಲ್ನಲ್ಲಿ ಹನ್ನೊಂದು ಸಾವುಗಳು ದೃಢಪಟ್ಟಿವೆ.
18 ವರ್ಷಗಳಲ್ಲಿ ಆರ್ಸಿಬಿ ಮೊದಲ ಐಪಿಎಲ್ ಪ್ರಶಸ್ತಿಯ ನಂತರ ಅನಿರೀಕ್ಷಿತ ಪ್ರಮಾಣದ ಆಚರಣೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಪೂರ್ಣ ಜವಾಬ್ದಾರಿಯನ್ನು ಒಪ್ಪಿಕೊಂಡರು. ಸಂತ್ರಸ್ತರಿಗೆ ದುಃಖ ವ್ಯಕ್ತಪಡಿಸಿದರು.