ಉಡುಪಿ, ಜೂ 16 (DaijiworldNews/HR): ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆಯ ಮೂಲಕ ಸರಕಾರ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಲು ಮುಂದಾಗಿದೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿಗಳ ಪೋಷಕರು ಕೂಡಾ ಮಕ್ಜಳನ್ನು ವಿದ್ಯಾಭ್ಯಾಸ ಕ್ಕಾಗಿ ಇಲ್ಲಿಗೆ ಕಳುಹಿಸಲು ಆತಂಕಿತರಾಗಿದ್ದಾರೆ. ಆ್ಯಂಟಿ ಕಮ್ಯನಲ್ ವಿಂಗ್ ಸ್ಥಾಪಿಸಿದಾಗ ಮೊದಲು ಸ್ವಾಗತ ಕೋರಿದವರು ಎಸ್ ಡಿ ಪಿ ಐ ನವರು. ಕಾಂಗ್ರೆಸ್ ಮತ್ತು ಎಸ್ ಡಿ ಪಿ ಐ ಒಂದೇ ನಾಣ್ಯದ ಎರಡು ಮುಖಗಳು. ಹಿಂಬಾಗಿಲಿನಿಂದ ಕಾಂಗ್ರೆಸ್ ಎಸ್ ಡಿ ಪಿ ಐ ಗೆ ಸಾಥ್ ನೀಡಿದೆ ಎಂದರು.
ಡಿಜೆ ಹಳ್ಳಿ, ಕೆಜೆ ಹಳ್ಳಿ ಘಟನೆಯನ್ನು ಪರಿಗಣಿಸದೇ ದಕ್ಷಿಣ ಕನ್ನಡ ಜಿಲ್ಲೆಯನ್ನು ಟಾರ್ಗೆಟ್ ಮಾಡಿ ಇದನ್ನು ಆ್ಯಂಟಿ ಕಮ್ಯುನಲ್ ವಿಂಗ್ ಪ್ರಾರಂಭ ಮಾಡಲಾಗಿದೆ. ಈ ಹಿಂದೆ ಪಿಎಫ್ ಐ ನ 150 ಮಂದಿಯ ಮೆಲಿನ ಕೇಸ್ ಅನ್ನು ಸರಕಾರ ವಾಪಾಸ್ ಪಡೆದಿದೆ. ಈ ವಿಂಗ್ ನ ಚೌಕಟ್ಟಿನಲ್ಲಿ ಏನೆಲ್ಲಾ ಬರಲಿದೆ ಎಂದು ಸ್ವಷ್ಟಪಡಿಸಬೇಕು. ಮಂಗಳೂರಿಗೆ ಒಂದು ಒಳ್ಳೆಯ ಮಾಸ್ಟರ್ ಪ್ಲಾನ್ ರೂಪಿಸಿ ಅಭಿವೃದ್ಧಿ ಗೆ ಮಹತ್ವ ನೀಡಬೇಕು. ಒಂದು ಸಮುದಾಯಕ್ಕೆ ಓಲೈಕೆ ಮಾಡುವ ರೀತಿಯಲ್ಲಿ ಇದನ್ನು ಮಾಡಲಾಗಿದೆ. ಪಿಎಫ್ಐ , ಸಿಎಫ್ಐ ಬ್ಯಾನ್ ಆಗಿದೆ. ಆದರೆ ಬೇರೆ ಬೇರೆ ಹೆಸರಿನಲ್ಲಿ ಸಂಘಟನೆ ಮಾಡುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದಿದ್ದಾರೆ.
ಪಠ್ಯ ಪುಸ್ತಕ, ಗೋಹತ್ಯೆ ನಿಷೇದ, ಮತಾಂತರ ನಿಷೇಧ ಕಾಯಿದೆ ವಿಚಾರ ಕುರಿತು ಮಾತನಾಡಿದ ಅವರು, ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಘೋಷಿಸಿದ 5 ಭಾಗ್ಯಗಳಿಗೆ ಯಾವ ಮೂಲದಿಂದ ಹಣ ಭರಿಸುತ್ತರೆ ಎಂಬ ಬಗ್ಗೆ ಸ್ವಷ್ಟತೆ ಇಲ್ಲ. ಜನರ ಮನಸ್ಸು ದಿಕ್ಕು ತಪ್ಪಿಸುವ ಹೇಳಿಕೆ ಗಳನ್ನು ಕೊಡುತ್ತಿದ್ದಾರೆ. ಮತಾಂತರ ನಿ಼ಷೇದ ಕಾಯಿದೆಯನ್ನು ಹಿಂಪಡೆಯುವ ಹೇಳಿಕೆ ನೀಡಿದ್ದಾರೆ. ತಕ್ಷಣ ಇದನ್ನು ಮರುಪರಿಶೀಲಿಸಬೇಕು. ದೇಶಕ್ಕೆ ಮಾರಕ ಇರುವ ಯಾವುದೇ ಕಾನೂನು ನ್ನು ತರಬಾರದು. ವೋಟ್ ಬ್ಯಾಂಕ್ ಗೆ ಇಂತಹ ಹೇಳಿಕೆಗಳನ್ನು ನೀಡಬಾರದು ಎಂದರು.
ಪಠ್ಯ ಪುಸ್ತಕದಲ್ಲಿ ದೇಶ ಭಕ್ತರ ವಿಚಾರ ಇದೆ. ನಮ್ಮೂರಿನ ವಿದ್ಯಾರ್ಥಿಗಳು ನಮ್ಮ ಊರಿನ ಬಗ್ಗೆ ತಿಳಿಯಬೇಕು. ಇದನ್ನು ಪ್ರತಿಭಟಿಸುತ್ತೇವೆ. ಗೋ ಹತ್ಯೆ ನಿಷೇಧ ಕಾಯಿದೆ ಮತ್ತು ಮತಾಂತರ ನಿಷೇಧ ಕಾಯಿದೆಯನ್ನು ಮುಂದುವರೆಸಬೇಕು. ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಇಂದು ಬೇರೆ ಬೇರೆ ರೀತಿಯಲ್ಲಿ ಸರಕಾರ ಬೆಲೆ ಏರಿಕೆ ಮಾಡಿದೆ. ಈ ಸರಕಾರ ಎಷ್ಟು ಬಾಳುತ್ತದೆ ಎಂದು ಕಾದು ನೋಡಬೇಕು. ಕೇಂದ್ರದ ಸಹಕಾರ ಇಲ್ಲದೆ ರಾಜ್ಯ ಸರಕಾರ ನಡೆಸಲು ಆಗುವುದಿಲ್ಲ. ಘೋಷಣೆ ಮಾಡುವ ಮುಂಚೆ ಕೇಂದ್ರ ಸರಕಾರದಲ್ಲಿ ಲಭ್ಯತೆಯನ್ನು ಪಡೆದುಕೊಳ್ಳಬೇಕಿತ್ತು. ದಾಖಲೆಗಳನ್ನು ಚರ್ಚೆಗೆ ತರಲಿ ಎಂದಿದ್ದಾರೆ.
ಇನ್ನು ಸಿದ್ದರಾಮಯ್ಯ 12 ಬಜೆಟ್ ಮಂಡಿಸಿದ ವ್ಯಕ್ತಿ. ಇದರ ಬಗ್ಗೆ ಅವರಿಗೆ ಅನುಭವ ಇರಬೇಕಿತ್ತು. ಕೇಂದ್ರದ ಬಗ್ಗೆ ಅಪವಾದ ಮಾಡುವುದಕ್ಕಿಂತ ಕೆಂದ್ರ ದಿಂದ ಪಡೆದಿರುವ ಮಾಹಿತಿಯನ್ನು ಜನರ ಮುಂದೆ ತರಲಿ ಎಂದು ಹೇಳಿದ್ದಾರೆ.