ಉಡುಪಿ, ಸೆ. 05 (DaijiworldNews/AA): ಶ್ರೀಕೃಷ್ಣನ ನಾಡಾದ ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಕಳೆಗಟ್ಟಿದ್ದು, ಈಗಾಗಲೇ ಹಬ್ಬದ ತಯಾರಿಗಳು ಭರದಿಂದ ಸಾಗಿವೆ. ಹಬ್ಬದ ಈ ಪರ್ವ ಕಾಲದಲ್ಲಿ ಪ್ರತಿವರ್ಷದಂತೆ ಈ ಬಾರಿ ಕೂಡಾ ಕಿಶೂ ಎಂಟರ್ ಪ್ರೈಸಸ್ ಮತ್ತು ದಾಯ್ಜಿವರ್ಲ್ಡ್ ಉಡುಪಿ ಪುಟಾಣಿಗಳಿಗೆ 'ಮುದ್ದುಕೃಷ್ಣ' ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಿದೆ.


ಕಳೆದ ಹಲವು ವರ್ಷಗಳಿಂದ ಕಿಶೂ ಎಂಟರ್ ಪ್ರೈಸಸ್ ಮತ್ತು ದಾಯ್ಜಿವರ್ಲ್ಡ್ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಧರ್ಭದಲ್ಲಿ ಮಕ್ಕಳಿಗಾಗಿ ಕೃಷ್ಣವೇಷ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ. ಈ ಹಿಂದೆ ಆಯೋಜಿಸಿದ್ದ 'ಮುದುಕೃಷ್ಣ', 'ಬೆಣ್ಣೆಕೃಷ್ಣ', 'ಯಶೋನಂದಲಾಲಾ' ಮತ್ತು 'ರಾಧಾಕೃಷ್ಣ' ಛಾಯಾಚಿತ್ರ ಸ್ಪರ್ಧೆಗಳಿಗೆ ಅಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
"ಮುದ್ದುಕೃಷ್ಣ ಛಾಯಾಚಿತ್ರ ಸ್ಪರ್ಧೆ 2026"
ಮಗುವು 1 ರಿಂದ 4 ವರ್ಷದೊಳಗಿನವರಾಗಿರಬೇಕು. ಕೃಷ್ಣ ಕೊಳಲು (ಬಾನ್ಸುರಿ) ಸ್ಪರ್ಧೆಯ ವಿಷಯವಾಗಿದ್ದು, ಛಾಯಾಚಿತ್ರಗಳಲ್ಲಿ ಕಾಣಿಸಿಕೊಳ್ಳಬೇಕು. ಸ್ಪರ್ಧಾರ್ಥಿಗಳು ಕೊಳಲಿನೊಂದಿಗೆ ತೆಗೆದ ಮಗುವಿನ ಮೂರು ವಿಭಿನ್ನ ಭಂಗಿಗಳ ಮೂರು ವಿಭಿನ್ನ ಛಾಯಾಚಿತ್ರಗಳನ್ನು ಸಲ್ಲಿಸಬೇಕು. ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ವಿಜೇತರು, ಜೊತೆಗೆ ಐದು ಸಮಾಧಾನಕರ ಬಹುಮಾನ ವಿಜೇತರು ನಗದು ಬಹುಮಾನ, ಟ್ರೋಫಿಗಳು ಮತ್ತು ಪ್ರಮಾಣಪತ್ರಗಳನ್ನು ಪಡೆಯುತ್ತಾರೆ. ಭಾಗವಹಿಸಿದ ಎಲ್ಲರಿಗೂ ಆನ್ಲೈನ್ ಪ್ರಮಾಣಪತ್ರವನ್ನು ನೀಡಲಾಗುವುದು.
ನಿಯಮಗಳು ಮತ್ತು ಷರತ್ತುಗಳು:
ಮುದ್ದು ಕೃಷ್ಣ:
1. ಮಗುವಿನ ವಯಸ್ಸು 1 ರಿಂದ 4 ವರ್ಷಗಳೊಳಗೆ ಇರಬೇಕು.
2. ವಿಷಯ (Theme): ಛಾಯಾಚಿತ್ರದಲ್ಲಿ ಶ್ರೀ ಕೃಷ್ಣನ ಕೊಳಲು(ಬಾಸುರಿ)ಕೇಂದ್ರಬಿಂದುವಾಗಿರಬೇಕು.
3. ಕೊಳಲನ್ನು ಪ್ರಮುಖ ವಿಷಯವನ್ನಾಗಿಟ್ಟುಕೊಂಡು ಮಗುವಿನ 3 ವಿಭಿನ್ನ ಭಂಗಿಯ ಛಾಯಾಚಿತ್ರಗಳನ್ನು ಸಲ್ಲಿಸಬೇಕು.
ನಿಯಮಗಳು:
1. ಎಡಿಟ್ ಮಾಡಲಾದ (Edited) ಅಥವಾ ವಾಟರ್ ಮಾರ್ಕ್ ಹೊಂದಿರುವ ಛಾಯಾಚಿತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.
2. ಛಾಯಾಚಿತ್ರಗಳು ಇತ್ತೀಚಿನದ್ದು ಆಗಿದ್ದು, ಯಾವುದೇ ಎಡಿಟ್ ಮಾಡದ, ಸ್ವಾಭಾವಿಕ ಹಾಗೂ ಉತ್ತಮಗುಣಮಟ್ಟದ್ದಾಗಿರಬೇಕು.
3. ಛಾಯಾಚಿತ್ರಗಳನ್ನು JPEG ಫಾರ್ಮಾಟ್ ನಲ್ಲಿ ಇದ್ದು, 1920 × 1080 ರೆಸ್ಯೂಲೇಶನ್ ನಲ್ಲಿಸಲ್ಲಿಸಬೇಕು.
4. ಛಾಯಾಚಿತ್ರ ರಚನೆಯಲ್ಲಿಕೃತಕ ಬುದ್ಧಿಮತ್ತೆ (Artificial Intelligence - AI) ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
5. ಮಗುವಿನ ಜನನ ಪ್ರಮಾಣಪತ್ರದ (Birth Certificate) ಅಥವಾ ಆಧಾರ್ ಕಾರ್ಡ್ (Adhaar Card)ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು.
6. ಪ್ರತಿಯೊಂದು ಅರ್ಜಿಯಲ್ಲೂ ಸ್ಪರ್ಧಿಯ ಹೆಸರು, ಪೋಷಕರ ಹೆಸರು, ಸಂಪೂರ್ಣ ಅಂಚೆ ವಿಳಾಸ ಹಾಗೂ ಸಂಪರ್ಕ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.
7. ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ, ಸಲ್ಲಿಸಲಾದ ಎಲ್ಲಾಛಾಯಾಚಿತ್ರಗಳ ಹಕ್ಕುಗಳು ತಮ್ಮದೇ ಆಗಿವೆ ಎಂದು ಸ್ಪರ್ಧಿಗಳು ದೃಢೀಕರಿಸುತ್ತಾರೆ.
8. ಅವಹೇಳನಕಾರಿ, ಅಶ್ಲೀಲ ಅಥವಾ ಅನುಚಿತ ವಿಷಯವಿರುವ ಛಾಯಾಚಿತ್ರಗಳನ್ನು ತಿರಸ್ಕರಿಸಲಾಗುತ್ತದೆ.
9. ತೀರ್ಪುಗಾರರ ತೀರ್ಮಾನವೇ ಅಂತಿಮ.
10. ವಿಜೇತರಿಗೆ ಪ್ರಥಮ, ದ್ವಿತೀಯ, ಮತ್ತು ತೃತೀಯ ಮತ್ತು 5 ಸಮಾಧಾನಕರ ಬಹುಮಾನ ವಾಗಿ ನಗದು ಬಹುಮಾನ, ಟ್ರೋಫಿಮತ್ತು ಪ್ರಮಾಣಪತ್ರ ನೀಡಲಾಗುವುದು .
11. ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಆನ್ಲೈನ್ ಪ್ರಮಾಣಪತ್ರ ನೀಡಲಾಗುವುದು.
12. ಕೊನೆಯ ದಿನಾಂಕದ ನಂತರ ಬಂದ ಛಾಯಾಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
13. ನೋಂದಣಿಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 07, 2026
ಛಾಯಾಚಿತ್ರಗಳನ್ನು ಈ ಕೆಳಗಿನ ಲಿಂಕ್ ಮೂಲಕ ಮಾತ್ರ ಕಳುಹಿಸುವುದು:
daijiworldudupi/skj26
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
+91 7338637689 / 90 / +91 9900161556