ಮಂಗಳೂರು, ಆ. 29 (DaijiworldNews/AA): ಹಬ್ಬಗಳ ಋತು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಉದ್ದೇಶದಿಂದ ಉಳ್ಳಾಲ ಪೊಲೀಸರು ವಿಶೇಷ ರೂಟ್ ಮಾರ್ಚ್ ನಡೆಸಿದರು.



ದೇರಳಕಟ್ಟೆಯ ನಿತ್ಯಾನಂದ ನಗರದಿಂದ ಆರಂಭಗೊಂಡ ರೂಟ್ ಮಾರ್ಚ್, ಕುತ್ತಾರಿನ ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಬಳಿ ಮುಕ್ತಾಯಗೊಂಡಿತು.
ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಸಾರ್ವಜನಿಕರಲ್ಲಿ ಸುರಕ್ಷತೆಯ ಭಾವನೆ ಮೂಡಿಸುವುದು ಈ ವಿಶೇಷ ಪಥಸಂಚಲನದ ಮುಖ್ಯ ಉದ್ದೇಶವಾಗಿತ್ತು.
ಉಳ್ಳಾಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿರೂಪಾಕ್ಷ ಸ್ವಾಮಿ ಅವರು ರೂಟ್ ಮಾರ್ಚ್ಗೆ ನೇತೃತ್ವ ವಹಿಸಿದ್ದರು. ಸಬ್ಇನ್ಸ್ಪೆಕ್ಟರ್ಗಳಾದ ರೇವಣ್ಣ ಸಿದ್ದಯ್ಯ ಹಾಗೂ ಸಂತೋಷ್ ಸೇರಿದಂತೆ ಪೊಲೀಸ್ ಠಾಣೆಯ ಇತರ ಸಿಬ್ಬಂದಿ ಪಥಸಂಚಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.