ಮಂಗಳೂರು,ಫೆ. 07 (DaijiworldNews/AK): ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ವಿರೋಧ ಪಕ್ಷಗಳ ತೀವ್ರ ಗದ್ದಲದ ನಡುವೆ ಲೋಕಸಭೆಯಲ್ಲಿ ಪ್ರಧಾನಿಯವರ ಪ್ರತಿಕ್ರಿಯೆ ಇಲ್ಲದೆ ಅಂಗೀಕರಿಸಲಾಗಿದ್ದು, ಸದ್ಯ ಇದರ ವಿರುದ್ಧ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಭಾಧ್ಯಕ್ಷರೇ ಪಾರ್ಲಿಮೆಂಟ್ ಗೆ ಬರಬೇಡಿ ಎಂದು ಪ್ರಧಾನಿಗೆ ಹೇಳಿರೋದು ಎಷ್ಟು ಸರಿ? ಪ್ರಧಾನಿಗೆ ಹಲ್ಲೆ ಮಾಡ್ತಾರೆ, ಮುತ್ತಿಗೆ ಹಾಕುತ್ತಾರೆ ಎಂದಿದ್ದಾರೆ. ಈ ರೀತಿ ಸಭಾಧ್ಯಕ್ಷರು ಹೇಳುವುದು ಎಷ್ಟು ಸರಿ? ಸ್ಪೀಕರ್ ಈ ರೀತಿಯ ಮಾಹಿತಿ ಪ್ರಧಾನಿಗೆ ನೀಡಿದ್ದು ಸರಿಯಲ್ಲ. ದಾಳಿಯ ಮಾಹಿತಿ ಇದ್ದಿದ್ದರೆ ಅಂತಹ ಸದಸ್ಯರ ವಿರುದ್ದ ಕ್ರಮ ಕೈಗೊಳ್ಳಬಹುದಿತ್ತು ಎಂದು ಐವನ್ ತಿಳಿಸಿದರು.