ಸುಳ್ಯ, ಫೆ. 02 (DaijiworldNews/TA): ಮಂಡೆಕೋಲು ಗ್ರಾಮದ ಮಂಡೆಕೋಲು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೊಳಪಡುವ ಕಳೇರಿ ಶ್ರೀ ಉಳ್ಳಾಕುಲು, ಧೂಮಾವತಿ ಮತ್ತು ರುದ್ರಚಾಮುಂಡಿ ಹಾಗೂ ಸಪರಿವಾರ ದೈವಗಳ ದೈವಸ್ಥಾನದ 10 ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಹಾಗೂ ಶ್ರೀ ದೈವಗಳ ನೇಮೋತ್ಸವವು ಜ.30 ರಿಂದ ಫೆ.1ರ ವರೆಗೆ ನಡೆಯಿತು.

ಜ.30ರಂದು ಸಂಜೆ ದೇವತಾ ಪ್ರಾರ್ಥನೆಯೊಂದಿಗೆ, ಉಗ್ರಾಣ ತುಂಬಿಸಲಾಯಿತು. ಜ.31ರಂದು ಪೂರ್ವಾಹ್ನ ಗಣಪತಿ ಹವನ, ನವಕ ಕಲಶಾಭಿಷೇಕ ಬಳಿಕ ಸಾರ್ವಜನಿಕರಿಂದ ಭಜನೆ ನಡೆಯಿತು. 1 ಗಂಟೆಯಿಂದ ಶ್ರೀ ದೈವಗಳಿಗೆ ತಂಬಿಲ, ಬಳಿಕ ಕನ್ಯಾನ ಶ್ರೀ ಚಾಮುಂಡಿ ಕಟ್ಟೆಯಲ್ಲಿ ತಂಬಿಲ, ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ಸಂಜೆ ಸಾರ್ವಜನಿಕರಿಂದ ಭಜನೆ ನಡೆಯಿತು.