ಕಾಸರಗೋಡು, ಫೆ. 01 (DaijiworldNews/TA): ಜಿಲ್ಲೆಯ ಇತಿಹಾಸ ಪ್ರಸಿದ್ಧ ಶೋಕಾಮಾತಾ ಧರ್ಮಕ್ಷೇತ್ರದ ವಾರ್ಷಿಕೋತ್ಸವದ ಧ್ವಜಾರೋಹಣ ಹಾಗೂ ಸಂತ ಸೆಬಾಸ್ಟಿಯನರ ಸ್ಮರಣೆಯು ಭಕ್ತಿಪೂರ್ವಕ ವಿಧಿ-ವಿಧಾನಗಳೊಂದಿಗೆ ನಡೆಯಿತು. ಧರ್ಮಕೇಂದ್ರದ ಪ್ರಧಾನ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ಪಿರೇರಾರ ಜೊತೆಗೆ , ವಂದನೀಯ ರೋಕ್ಕಿ ಫೆರ್ನಾಂಡಿಸ್, ವಂದನೀಯ ಶರಣ್ ಕ್ರಾಸ್ತ ಹಾಗೂ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರಾದ ಸಿರಿಲ್ ಕ್ರಾಸ್ತ ಧ್ವಜಾರೋಹಣ ನೆರವೇರಿಸಿ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ನೀಡಿದರು.
















ನಂತರ ನಡೆದ ದಿವ್ಯಬಲಿಪೂಜೆಯ ನೇತೃತ್ವ ವಹಿಸಿದ ವಂದನೀಯ ಸ್ಟ್ಯಾನಿ ಪಿರೇರಾ ತಮ್ಮ ಪ್ರವಚನದಲ್ಲಿ "ಸಮಾಜದ ಕಲ್ಯಾಣಕ್ಕಾಗಿ ದುಡಿಯುವವರು ಯಾವತ್ತೂ ಆದೃಶ್ಟವಂತರು. ಅವರು ಈ ಭೂಲೋಕದಲ್ಲಿ ಪರಮಾತ್ಮನ ಇಛ್ಛೆಯನ್ನು ನೆರವೇರಿಸಲು ಕಾರ್ಯನಿರತರಾಗಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಅವರಿಗೆ ಅನೇಕ ಅಡೆತಡೆಗಳು ಬರಬಹುದು. ಆದರೆ ಅವರು ವಿಘ್ನಗಳ ಬಗ್ಗೆ ಚಿಂತೆಪಡಬೇಕಾಗಿಲ್ಲ. ಯಾಕೆಂದರೆ ಪರರ ಹಿತವನ್ನು ಬಯಸುವವರಿಗೆ ಯಾವತ್ತೂ ದೇವರ ಅಭಯಹಸ್ತವಿರುತ್ತೆ" ಎಂದರು.
ಬಲಿಪೂಜೆಯ ನಂತರ ಸಂತ ಸೆಬಾಸ್ಟಿಯನ್ ಅವರ ಸ್ಮರಿಣಾರ್ಥ ನಡೆದ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಳ್ಗೊಂಡರು. ಫೆಬ್ರವರಿ 9 ರಂದು ಧರ್ಮಕೇಂದ್ರದಲ್ಲಿ 'ಕೊಂಪ್ರಿಚೊ ಆಯ್ತಾರ್' ಅಥವಾ ಪರಮಪ್ರಸಾದ ಭಾನುವಾರ ನಡೆಯಲ್ಲಿದ್ದು ಫೆಬ್ರವರಿ ಹತ್ತು, ಹನ್ನೊಂದು ಹಾಗೂ ಹನ್ನೆರಡರಂದು ವಾರ್ಷಿಕ ಮಹೋತ್ಸವು ಭಕ್ತಿ ಹಾಗೂ ಸಂಭ್ರಮದಿಂದ ಜರುಗಲಿದೆ.