ಸುಳ್ಯ, ಜ.30 (DaijiworldNews/TA): ಆಲೆಟ್ಟಿ ಪಂಜಿಮಲೆ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಫೆ.18,19 ರಂದು ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಕೊಳ್ಳಿ ಮುಹೂರ್ತವು ಜ.29 ರಂದು ನಡೆಯಿತು.

ಬೆಳಗ್ಗೆ ಗುಂಡ್ಯ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಪ್ರಾರ್ಥಿಸಿ, ವಿಷ್ಣುಮೂರ್ತಿ ದೈವದ ಪಾತ್ರಿ ರಾಮ ಮಣಿಯಾಣಿ ಆಲೆಟ್ಟಿ ಮತ್ತು ವಯನಾಟ್ ಕುಲವನ್ ದೈವದ ಪಾತ್ರಿ ಶಿವರಾಮ ಆಡಿಂಜ (ಉದುಮ) ರವರ ನೇತೃತ್ವದಲ್ಲಿಭಂಡಾರವು ಸದಾಶಿವ ದೇವಸ್ಥಾನಕ್ಕೆ ಸಾಗಿ ಬಂದು ಬಳಿಕ ಒತ್ತೆಕೋಲ ಮಜಲಿಗೆ ಆಗಮಿಸಿತು. ನಂತರ ದರ್ಶನ ಪಾತ್ರಿಯವರಿಂದ ಅಭಯದ ನುಡಿಯಾಗಿ ಕೊಳ್ಳಿ ಮುಹೂರ್ತ ನೆರವೇರಿತು. ಆಗಮಿಸಿದ ಭಕ್ತಾದಿಗಳಿಗೆ ಅರಸಿನ ಪ್ರಸಾದ ವಿತರಣೆಯಾಯಿತು.