ಉಡುಪಿ, ಜ. 20 (DaijiworldNews/ TA): ದರ್ಪಣ ಉಡುಪಿ ತನ್ನ 10ನೇ ವಾರ್ಷಿಕೋತ್ಸವ ‘ದಶಕಂ’ ಅನ್ನು ಶಿರೂರು ಪರ್ಯಾಯ 2026ರ ಶುಭ ಸಂದರ್ಭದಲ್ಲಿ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಆಚರಿಸುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿತು. ಕಾರ್ಯಕ್ರಮವು ಉಡುಪಿ ಅಜ್ಜರಕಾಡಿನ ಬುಜಂಗ ಪಾರ್ಕ್ನಲ್ಲಿ ನಡೆಯಿತು.

ಕಲಾಭಿಮಾನಿಗಳು, ಹಿತೈಷಿಗಳು ಹಾಗೂ ಸಾಂಸ್ಕೃತಿಕ ಪೋಷಕರ ಭಾರೀ ಉಪಸ್ಥಿತಿಗೆ ಕಾರ್ಯಕ್ರಮ ಸಾಕ್ಷಿಯಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಹೋಟೆಲ್ ವೈಟ್ ಲೋಟಸ್ನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಶೆಟ್ಟಿ, “ಒಂದು ದಶಕವನ್ನು ಪೂರ್ಣಗೊಳಿಸುವುದು ಸುಲಭದ ಸಾಧನೆ ಅಲ್ಲ. ಈ ಮಹತ್ವದ ಸಾಧನೆಗಾಗಿ ದರ್ಪಣ ತಂಡವನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಕಲ್ಕೂರ ಬಿಲ್ಡರ್ಸ್ ಅಂಡ್ ಡೆವಲಪರ್ಸ್ನ ಮಾಲೀಕ ರಂಜನ್ ಕಲ್ಕೂರ ಮಾತನಾಡಿ, ಉಡುಪಿ ದೇವಾಲಯಗಳು, ಶಿಕ್ಷಣ ಮತ್ತು ಸಮೃದ್ಧ ಸಾಂಸ್ಕೃತಿಕ ಪರಂಪರೆಯಿಂದ ಪ್ರಸಿದ್ಧವಾಗಿದೆ ಎಂದು ಹೇಳಿದರು. ದರ್ಪಣಾ ಸಂಸ್ಥೆಯವರಾದ ರಮ್ಯಾರವರು ಪ್ರಾಸ್ತಾವಿಕ ಮಾತನಾಡಿದರು.ಈ ಸಂದರ್ಭದಲ್ಲಿ ಮಣಿಪಾಲದ ಗಾಂಧಿಯನ್ ಮತ್ತು ಪೀಸ್ ಸ್ಟಡೀಸ್ ನಿರ್ದೇಶಕ ಡಾ. ವರದೇಶ್ ಹೀರೇಗಂಗೆ, ರಮಾನಂದ ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.