ಮಂಗಳೂರು, ಜ. 20 (DaijiworldNews/ TA): ಹಯತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸ ಎದುರುಪದವು ಮೂಡುಶೆಡ್ಡೆ ಇದರ 22ನೇ ವಾರ್ಷಿಕ ಸ್ವಲಾತ್ ಕಾರ್ಯಕ್ರಮ ಅದ್ದೂರಿಯಾಗಿ ಹಯತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸ ಮರ್ಹೂಂ ಶಂಸುಲ್ ಉಲಮಾ ವೇದಿಕೆಯಲ್ಲಿ ನೆರವೇರಿತು.













ಕಾರ್ಯಕ್ರಮದ ನೇತೃತ್ವವನ್ನು ಅಸ್ಸಯ್ಯದ್ ನಜ್ಮುದ್ದೀನ್ ಪೂಕೋಯ ತಂಗಲ್ ಅಲ್ ಹೈದ್ರೋಸಿ ವಹಿಸಿದ್ದರು. ಕಾರ್ಯಕ್ರಮವನ್ನು ಹಯತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸ ಖತೀಬ್ ಸಫ್ವಾನ್ ಇರ್ಫಾನಿ ಮುಂಡೋಳೆ ಉದ್ಘಾಟಿಸಿದರು. ಈ ವೇಳೆ ಸಮುದಾಯದ ಹೆಮ್ಮೆಯನಾಯಕರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ, ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಬೆಂಗಳೂರು ಇದರ ಉಪಾಧ್ಯಕ್ಷರಾದ ಮೌಲಾನಾ ಎನ್ ಕೆ ಎಂ ಶಾಫಿ ಸಅದಿ, ದ ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಸೀರ್ ಲಕ್ಕಿ ಸ್ಟಾರ್, ಸಮಾಜ ಸೇವಕರು ಉದ್ಯಮಿ ಆಫ್ಹಾಂ ಗ್ರೂಪ್ ಮಾಲಕರಾದ ಶಾಫಿ ಮುಲ್ಲರಪಟ್ಟಣ, ಉದ್ಯಮಿ ಖಾಲಿದ್ ಪರಾರಿ, ಇಸ್ಲಾಹುಲ್ ಇಸ್ಲಾಂ ಮಸೀದಿ ಅಧ್ಯಕ್ಷ ಇಕ್ಬಾಲ್ ಜಿ ಪಿ, ಖ್ಯಾತ ವಕೀಲರು ಅಬ್ದುಲ್ ನಝೀರ್, ಎ ಕೆ ಓಲ್ಡ್ ಸ್ಕ್ರಾಪ್ ಮಾಲಕರು ಹಾಜಿ ಮುಹಮ್ಮದ್ ಹನೀಫ್ ಇತರ ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಾಮಂಜೂರು ಇಸ್ಲಾಹುಲ್ ಇಸ್ಲಾಂ ಜುಮ್ಮಾ ಮಸೀದಿ ಖತೀಬ್ ಮುಹಮ್ಮದ್ ಫಾಯಿಝ್ ಅಲ್ ಫಾಳಿಲಿ, ಜಮಾಲಿಯ ಜುಮ್ಮಾ ಮಸೀದಿ ಬೈಲುಪೇಟೆ ಖತೀಬ್ ಶಫೀಕ್ ಜಲಾಲಿ ಇರ್ಫಾನಿ, ಹಿದಾಯತುಲ್ ಇಸ್ಲಾಂ ಮಸೀದಿ ಮೂಡುಶೆಡ್ಡೆ ಖತೀಬ್ ಹಾಫಿಲ್ ಸುಲೈಮಾನ್ ಹನೀಫಿ, ಹಯತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸ ಎದುರುಪದವು ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಎ ಪಿ, ಉಪಾಧ್ಯಕ್ಷ ಅಬ್ದುಲ್ ರಝಾಕ್ ಎ ಆರ್, ಕಾರ್ಯದರ್ಶಿ ಸಾಜುದ್ದೀನ್, ಸದರ್ ಉಸ್ತಾದ್ ಝುಬೈರ್ ಯಮಾನಿ, ಮುಅಲ್ಲಿo ಜಾಬಿರ್ ಜೌಹರಿ, ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ನೌಶಾದ್, ಇಸ್ಲಾಮಿಕ್ ಸೋಶಿಯಲ್ ಗ್ರೂಪ್ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮತ್ತಿತರರು ಉಪಸ್ಥಿತರಿದ್ದರು.