ಬಂಟ್ವಾಳ, ಜ. 17 (DaijiworldNews/TA): ಜೆಸಿಐ ವಿಠಲ್ ನೇತ್ರಾವತಿ ಝೋನ್ 15 ಜೆಸಿಐ ಇಂಡಿಯಾ ಇದರ ನೂತನ ಘಟಕ "ಜೆಸಿಐ ತುಂಬೆ ಇಲೈಟ್" ನ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಬಂಟ್ವಾಳದ ಬಿ.ಸಿ.ರೋಡಿನ ರೋಟರಿ ಭವನದಲ್ಲಿ ನಡೆಯಿತು. ಜೆಸಿ ಸಮತಾ ಕಿಶೋರ್ ಅವರು ಅಧ್ಯಕ್ಷೆಯಾಗಿ ಹಾಗೂ ಅವರ ಜೊತೆಗೆ ಪದಾಧಿಕಾರಿಗಳ ಪದಪ್ರಧಾನ ಕಾರ್ಯಕ್ರಮ ನಡೆಯಿತು.

ಘಟಕ ಉದ್ಘಾಟಿಸಿದ ಪ್ರೊ.ಮರಿಯಾ ಡಿ.ಕೊಸ್ತಾ ಮಾತನಾಡಿ, ಜೆಸಿಐ ಅನ್ನುವುದು ತಾನು ಬೆಳೆಯುವ ಜೊತೆಗೆ ಜೊತೆಗೆ ಒಂದಷ್ಟು ಜನರನ್ನು ಬೆಳೆಸುವ ಉದ್ದೇಶ ಸಂಸ್ಥೆಯಾಗಿದೆ. ತುಂಬೆ ಇಲೈಟ್ ನ ಜೊತೆ ನಾನು ಸೇರಿಕೊಂಡು ಸಾಮಾಜಿಕವಾಗಿ ಜನೋಪಯೋಗಿ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು. ಪಬ್ಲಿಕ್ ಸ್ಪೀಚ್ ಜೊತೆ ನಾಯಕತ್ವ ಗುಣಗಳನ್ನು ಪಡೆದುಕೊಳ್ಳಲು ಜೆಸಿಐ ಉತ್ತಮ ವೇದಿಕೆಯಾಗಿದ್ದು,ಅವಕಾಶಗಳನ್ನು ಬಳಸಿಕೊಂಡು ಸಮಾಜದಲ್ಲಿ ಗೌರವಯುತ ವ್ಯಕ್ತಿಗಳಾಗಿ ಎಂದು ಶುಭ ಹಾರೈಸಿದರು.
ನೂತನ ಅಧ್ಯಕ್ಷೆ ಸಮತಾಕಿಶೋರ್ ಮಾತನಾಡಿ, ಹೊಸ ಸದಸ್ಯರು ನಾಯಕತ್ವ ಗುಣಗಳ ಮೂಲಕ ಸಮಾಜದಲ್ಲಿ ಗುರುತಿಸಲ್ಪಡಬೇಕು ಎಂಬುದು ನನ್ನ ಆಶೆಯಾಗಿದೆ ಎಂದರು. ಅತಿಥಿಗಳಾಗಿ ಸೆನ್. ಜಿತೇಶ್ ಪೆರೇರಾ ಅವರು ಭಾಗವಹಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ವಲಯ ಸಂಯೋಜಕರಾದ ಜೆಸಿ ರಂಜಿತ್, ಜೆಸಿ ಸುಹಾಸ್ ಮರಿಕೆ ಹಾಗೂ ಜೆಸಿ ಜಗದೀಶ್ ರೈ, ವಿಟ್ಲ ಜೆಸಿಐ ಕಾರ್ಯದರ್ಶಿ ಜೆಸಿ ಹಾರ್ತಿಕ್ ಉಪಸ್ಥಿತರಿದ್ದರು.