ಕಾಸರಗೋಡು, ಜ. 12 (DaijiworldNews/TA): ರಾಷ್ಟ್ರೀಯ ಹೆದ್ದಾರಿ ಕುಂಬಳೆ ಟೋಲ್ ಗೇಟ್ ನಲ್ಲಿ ಟೋಲ್ ಶುಲ್ಕ ವಸೂಲಿ ಪ್ರತಿಭಟಸಿ ಸಮಿತಿ ನೇತೃತ್ವದಲ್ಲಿ ಮಂಗಳವಾರ ಬೆಳಗಿನಿಂದ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸಲು ಟೋಲ್ ವಿರೋಧಿ ಹೋರಾಟ ಸಮಿತಿ ತೀರ್ಮಾನಿಸಿದೆ.

ಸತ್ಯಾಗ್ರಹಕ್ಕೆ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ನೇತೃತ್ವ ನೀಡಲಿದ್ದಾರೆ, ಕಾಸರಗೋಡು-ಮಂಜೇಶ್ವರ ಉಭಯ ತಾಲೂಕುಗಳ ಜನರ ಜನಾಂದೋಲನವಾಗಿ ಈ ಹೋರಾಟ ಮಾರ್ಪಡಿಸಲಾಗುವುದೆಂದು ಹೋರಾಟ ಸಮಿತಿ ತಿಳಿಸಿದೆ. ಟೋಲ್ ಶುಲ್ಕ ವಿರುದ್ಧ ಹೈಕೋರ್ಟ್ ಅಂತಿಮ ತೀರ್ಪು ಹೊರಬರುವ ಮುನ್ನವೇ ಶುಲ್ಕ ವಸೂಲು ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಾಡಿನ ಜನರ ಮೇಲೆ ಅಧಿಕಾರ ಪ್ರಯೋಗಕ್ಕೆ ಮುಂದಾಗಿದೆ ಎಂದು ಆರೋಪಿಸಿದೆ. ಅವರು ನ್ಯಾಯಾಲಯ ತೀರ್ಪು ಬರುವ ತನಕ ಟೋಲ್ ವಸೂಲಿ ಸ್ಥಗಿತಗೊಳಿಸಬೇಕೆಂದು ಹೋರಾಟ ಸಮಿತಿ ತಿಳಿಸಿದೆ.