ಕಾಸರಗೋಡು, ಜ. 12 (DaijiworldNews/TA): ಕುಂಬಳೆ ಅನಂತಪುರ ಕೈಗಾರಿಕಾ ಎಸ್ಟೇಟ್ನ ಪಟಾಕಿ ತಯಾರಿ ಘಟಕದಲ್ಲಿ ಉಂಟಾದ ಸ್ಫೋಟದಿಂದ ಇಬ್ಬರು ಗಾಯಗೊಂಡ ಘಟನೆ ನಡೆದಿದೆ.




ಪಟಾಕಿ ತಯಾರಿ ಘಟಕದ ಮಿಕ್ಸಿಂಗ್ ಶೆಡ್ ಪೂರ್ಣವಾಗಿ ಉರಿದಿದೆ. ಘಟನೆಯಿಂದ ತಮಿಳುನಾಡು ಶಿವಕಾಶಿಯ ಶಂಕರ ಮತ್ತು ಕರುಪ್ಪ ಸ್ವಾಮಿ ಗಾಯಗೊಂಡಿದ್ದಾರೆ. ಸ್ಪೋಟದ ಸಂದರ್ಭದಲ್ಲಿ ಕಾರ್ಮಿಕರು ಹೊರ ಹೋಗಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಉಪ್ಪಳ ಹಾಗೂ ಕಾಸರ ಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.