ಮಂಗಳೂರು, ಜ. 10 (DaijiworldNews/TA): ಬಿಜೆಪಿ ಎಂದೂ ಮೀಸಲಾತಿ, ಮಹಿಳಾ ಸಬಲೀಕರಣದ ಪರ ಮಾತನಾಡಿಲ್ಲ. ಪ್ರಗತಿಪರ ಚಿಂತನೆ ಮೂಲಕ ಬದಲಾವಣೆ ತರುವ ಕೆಲಸವನ್ನು ಕೂಡ ಬಿಜೆಪಿ ಆರೆಸ್ಸೆಸ್ ಮಾಡಿಲ್ಲ. ಮಹಾತ್ಮ ಗಾಂಧಿಯವರ ಬಗ್ಗೆ ಎಂದಿಗೂ ಬಿಜೆಪಿ ಅಂತರಾಳದಲ್ಲಿ ಅಭಿಪ್ರಾಯದಲ್ಲಿ ಇರಲಿಲ್ಲ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅವರು ಮಾತನಾಡುತ್ತಿದ್ದರು. ಯುಪಿಎ ಅವಧಿಯಲ್ಲಿ ಉದ್ಯೋಗದ ಹಕ್ಕು, ಆಹಾರದ ಹಕ್ಕು ಶಿಕ್ಷಣ ಹಕ್ಕು, ಮಾಹಿತಿ ಸೇರಿದಂತೆ ಹಲವು ಕಾನೂನುಗಳನ್ನು ತರಲಾಗಿತ್ತು. ಕ್ರಾಂತಿಕಾರಿ ಕಾನೂನುಗಳನ್ನು ಯುಪಿಎ ವೇಳೆ ತರಲಾಗಿತ್ತು. ಆದರೆ ಬಿಜೆಪಿ ಅವಧಿಯಲ್ಲಿ ಈ ರೀತಿಯ ಒಂದಾದರೂ ಅನುಷ್ಟಾನ ಮಾಡಿಲ್ಲ. ಎಂದು ಅವರು ಪ್ರಶ್ನಿಸಿದರು.