ಕಾರ್ಕಳ, ಜ. 05 (DaijiworldNews/TA): ಥೀಮ್ ಪಾರ್ಕ್ ನಲ್ಲಿ ತಾಮ್ರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿನ ಬಾಗಿಲು ಒಡೆದು ಕಳವು ನಡೆಸಲಾಗಿದೆ. ಮೇಲ್ಚಾವಣಿ ಕಿತ್ತುಹಾಕಲಾಗಿರುವುದು ದುರ್ದೈವ. ಹಾಗಾಗಿ ಕಳ್ಳತನ ವಾಗಲು ಕಾಂಗ್ರೆಸ್ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣ ಎಂದು ತಿಳಿಸಿದ್ದಾರೆ.

ಬಿಜೆಪಿ ಸರಕಾರ ಇದ್ದಾಗ ಮಂಜೂರು ಮಾಡಲಾಗಿದ್ದ ನಾಕೂವರೆ ಕೋಟಿ ರೂ. ಬಿಡುಗಡೆಗೆ ಬಾಕಿ ಇದೆ. ಹಾಗಾಗಿ ಈ ಹಣ ತಕ್ಷಣವೇ ಬಿಡುಗಡೆ ಮಾಡಬೇಕಿದೆ. ಥೀಮ್ ಪಾರ್ಕ್ ಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕೊಡಬೇಕು. ಇಲ್ಲಿ ಕಾರ್ಯಕ್ರಮಗಳನ್ನು ಮಾಡಲು ಕೂಡ ಅವಕಾಶ ನೀಡಬೇಕು. ಥೀಮ್ ಪಾರ್ಕ್ ಬಗ್ಗೆ ಅನಗತ್ಯ ಅಪಪ್ರಚಾರ ಮಾಡಿದವರು ಕ್ಷಮೆ ಕೇಳಬೇಕು. ಬಿಜೆಪಿ ಮಂಜೂರು ಮಾಡಿದ್ದ 4.5 ಕೋ.ರೂ. ಬಿಡುಗಡೆಗೆ ಬಾಕಿ ಇದ್ದು, ಆದಷ್ಟು ಬೇಗ ಬಿಡುಗಡೆ ಮಾಡಬೇಕು ಎಂದು ಅವರು ತಿಳಿಸಿದರು.