ಮಂಗಳೂರು,ಆ. 30 (DaijiworldNews/AK): ಸಾರ್ವಜನಿಕ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು 17ನೇ ವರ್ಷದ ಜಪ್ಪಿನಮೊಗರು ಗಣೇಶೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಗಮಿಸಿದ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ರವರು ಮಾತನಾಡುತ್ತಾ ಸಭೆಯಲ್ಲಿ ಎಲ್ಲಾ ಧರ್ಮದ ಎಲ್ಲಾ ಜಾತಿಯ ಗಣ್ಯರು ಭಾಗವಹಿಸಿರುವುದು ಸರ್ವಧರ್ಮದ ಸೌಹಾರ್ದತೆಯನ್ನು ಸಾರುವ ಗಣೇಶೋತ್ಸವ ಇದಾಗಿದೆ.

ಇಂತಹ ಗಣೇಶೋತ್ಸವಗಳು ರಾಜ್ಯದ ಎಲ್ಲಾ ಕಡೆಯು ನಡೆಯಬೇಕು ಇದರಿಂದ ಸಮಾಜದಲ್ಲಿ ಐಕ್ಯತೆ ಮೂಡುತ್ತದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿʼಸೋಜಾರವರು ವಹಿಸಿದ್ದುಅಕ್ಷತಾ ಹಾಗೂ ಸಂತೋಷ್ ಶೆಟ್ಟಿ ತೋಚಿಲಗುತ್ತು ದಂಪತಿಗಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಹಾಗೂ ಧರ್ಮದರ್ಶಿ ಸತೀಶ್ ಬಂದಲೆ, ಜೀತೇಂದ್ರ ಕೊಟ್ಟಾರಿ, ಎ.ಸಿ. ವಿನಯರಾಜ್, ಸಿರಾಜ್ ಬಜ್ಪೆ, ಸದಾಶಿವ ಎಳ್ಳಾಲ್ ವಿಶ್ವಹಿಂದೂ ಪರಿಷತ್ ಮುಖಂಡ ಹಾಗೂ ಉದ್ಯಮಿ ಅಡ್ಯಾರ್ ಅನಂದ ಶೆಟ್ಟಿ, ಉದ್ಯಮಿ ಚಂದ್ರಹಾಸ ಅಡ್ಯಂತಾಯ ಕುತ್ತಾರ್ಗುತ್ತು, ಸೀತಾರಾಮ ಜಪ್ಪು, ಉದ್ಯಮಿ ಸಂತೋಷ್ ಶೆಟ್ಟಿ, ಲ| ಹರೀಶ್ ಆಳ್ವ, ರಾಮಚಂದ್ರ ಅಳ್ವ, ಶ್ರೀಮತಿ ಶ್ವೇತಾ ದೀಪಕ್ ಹಾಗೂ ದೀಪಕ್ ಎಚ್ ಕೆ. ಮೊದಲಾದ ಗಣ್ಯರು ಭಾಗವಹಿಸಿದ್ದು, ಸಭೆಯಲ್ಲಿ ನೇತ್ರ ತಜ್ಞ ಪ್ರಸಾದ್ ನೇತ್ರಾಲಯ ಸ್ಪೆಷಾಲಿಟಿ ಅಸ್ಪತ್ರೆಯ ಮುಖ್ಯಸ್ಥ, ಡಾ| ಕೃಷ್ಣ ಪ್ರಸಾದ್ ಕೂಡ್ಲುರವರನ್ನು ಸನ್ಮಾನಿಸಲಾಯಿತು.
ಸಮಿತಿಯ ಅಧ್ಯಕ್ಷರಾದ ಜೆ.ನಾಗೇಂದ್ರ ಕುಮಾರ್ ಸ್ವಾಗತಿಸಿದರು. ಕಾರ್ಯಧ್ಯಕ್ಷರಾದ ಸುಧಾಕರ್ ಜೆ. ವಂದಿಸಿದರು. ಶ್ರೀಮತಿ ಕವಿತಾ ಗಂಗಾಧರ್ ಸನ್ಮಾನ ಪತ್ರ ಚರ್ಚಿಸಿದರು. ಶ್ರೀ ರೋಹಿತ್ ಉಳ್ಳಾಲ್ ಹಾಗೂ ಶ್ರೀ ಹರೀಶ್ ಶೆಟ್ಟಿ ತಾರ್ದೋಲ್ಯ ಕಾರ್ಯಕ್ರಮ ನಿರೂಪಿಸಿದರು.