ಸುಳ್ಯ, ಜು. 08 (DaijiworldNews/AK): ಅರಂತೋಡು ಅಜ್ಜನ ಗದ್ದೆ ದಿನೇಶ ಬಾಳೆಕಜೆ ಅವರ ತೋಟಕ್ಕೆ ಸುಮಾರು 3-4 ದಿನದಿಂದ ನಿರಂತರ ಕಾಡಾನೆಗಳು ನಿರಂತರ ದಾಳಿ ಮಾಡುತ್ತಿದ್ದು ಅಪಾರ ಕೃಷಿ ಬೆಳೆಗಳು ನಾಶವಾದ ಘಟನೆ ಮಂಗಳವಾರ ವರದಿಯಾಗಿದೆ.


ಅಡಿಕೆ ಮರ,ಬಾಳೆ,ತೆಂಗು ಹಾಗೂ ಇತರ ಕೃಷಿ ಬೆಳೆಗಳನ್ನು ನಾಶಪಡಿಸಿವೆ.ಇದರಿಂದ ಅವರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.