ವಿಟ್ಲ, ಜೂ. 15 (DaijiworldNews/TA) : ಕೊಳ್ನಾಡು ಗ್ರಾಮದ ಸಾಲೆತ್ತೂರು ಕಟ್ಟೆ ಅಂಗನವಾಡಿ ಪುಟಾಣಿಗಳು ನಡೆದು ಹೋಗುವ ಇಳಿಜಾರಿನಲ್ಲಿ ಅಪಾಯಕಾರಿ ಮೆಟ್ಟಿಲುಗಳಿದ್ದು, ಮಳೆಗಾಲದ ಕಾರಣ ಅಪಾಯ ಎದುರಾಗುವ ಭೀತಿಯಲ್ಲಿದ್ದಾರೆ ಸಾರ್ವಜನಿಕರು.


ಇಲ್ಲಿನ ದುಸ್ಥಿತಿಯನ್ನು ವಿವರಿಸಿದ ತಕ್ಷಣ ಸ್ಪಂದಿಸಿದ ಕೊಳ್ನಾಡು ಗ್ರಾಮ ಪಂಚಾಯತ್ ಪಿಡಿಒ ಲಾವಣ್ಯ, ಅಧ್ಯಕ್ಷರಾದ ಅಶ್ರಫ್ ಮಹಮ್ಮದ್, ಗ್ರಾಮ ಆಡಳಿತಾಧಿಕಾರಿ ಕರಿಬಸವ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ತಕ್ಷಣ ಮೆಟ್ಟಿಲುಗಳನ್ನು ದುರಸ್ತಿಗೊಳಿಸಿ ಬದಿಯಲ್ಲಿ ಕಬ್ಬಿಣದ ಆಧಾರ ಸ್ತಂಭ ಅಳವಡಿಸಲು ಪಂಚಾಯತ್ ಪಿಡಿಒ ಹಾಗೂ ಅಧ್ಯಕ್ಷರು ಸೂಚಿಸಿದ್ದಾರೆ.