ಕಾಸರಗೋಡು, ಜೂ. 12 (DaijiworldNews/TA): ಏಳು ತಿಂಗಳ ಹಿಂದೆ ಕಳವು ನಡೆದ ಮನೆಯಲ್ಲಿ ಮತ್ತೆ ಕಳವು ಕೃತ್ಯ ನಡೆದ ನಡೆದ ಘಟನೆ ಕಾಸರಗೋಡಿನ ಪೈವಳಿಕೆ ಸಮೀಪದ ಕಳಾಯಿ ಎಂಬಲ್ಲಿ ನಡೆದಿದೆ. ಮನೆಯಿಂದ 50 ಸಾವಿರ ರೂ. ನಗದು ಹಾಗೂ ಸಿ ಸಿ ಟಿ ವಿ ಡಿವಿಆರ್ ಹಾಗೂ ಇನ್ನಿತರ ಉಪಕರಣಗಳನ್ನು ಕಳವು ಮಾಡಲಾಗಿದೆ ಎನ್ನಲಾಗಿದೆ.

ಕಳಾಯಿ ಅಜೆಕ್ಕಳ ದ ಅಶೋಕ್ ಕುಮಾರ್ ಶೆಟ್ಟಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಅಶೋಕ್ ಶೆಟ್ಟಿ ಬೆಂಗಳೂರಿನಲ್ಲಿದ್ದು ,ಮನೆಯಲ್ಲಿ ವೃದ್ದ ತಂದೆ ಮಾತ್ರ ಇದ್ದಾರೆ. ಸಂಬಂಧಿಕ ರೋರ್ವರು ಆಹಾರ ನೀಡಲು ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಬೆರಳಚ್ಚು ತಜ್ಞರು, ಶ್ವಾನ ದಳ ಮಾಹಿತಿ ಕಲೆ ಹಾಕಿದೆ. ಏಳು ತಿಂಗಳ ಹಿಂದೆ ಇದೇ ಮನೆಯಲ್ಲಿ ಕಳವು ನಡೆದಿತ್ತು. ಮನೆ ಕೆಲಸಕ್ಕಿದ್ದ ಕರ್ನಾಟಕ ಮೂಲದ ಕಾರ್ಮಿಕ ನೋರ್ವ ಚಿನ್ನಾಭರಣ ಕಳವು ಗೈದು ಪರಾರಿ ಯಾಗಿದ್ದನು. ಬಳಿಕ ಈತನನ್ನು ಬಂಧಿಸಲಾಗಿತ್ತು. ಇದೀಗ ಮನೆಯಲ್ಲಿ ಮತ್ತೆ ಕಳವು ಕೃತ್ಯ ನಡೆದಿದೆ.