ಕಾಸರಗೋಡು, ಜೂ. 07 (DaijiworldNews/TA): ಕಸಾಯಿಖಾನೆಗೆ ತರಲಾಗಿದ್ದ ಕೋಣ ಹಗ್ಗ ತುಂಡರಿಸಿ ಓಡಿ, ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾದ ಘಟನೆ ತಳಂಗರೆಯಲ್ಲಿ ನಡೆದಿದೆ. ಕೊನೆಗೆ ಕೋಣವನ್ನು ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನಾಗರಿಕರು ಹಿಡಿದು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಹಗ್ಗ ತುಂಡರಿಸಿ ಓಡಿದ ಕೋಣದಿಂದಾಗಿ ಗಂಟೆಗಳ ಕಾಲ ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿಸಿತ್ತು. ಅಲ್ಲದೆ ಹಲವು ಮನೆಗಳ ಹಿತ್ತಿಲಿನೊಳಗೆ ನುಗ್ಗಿ ಹಾನಿ ಉಂಟು ಮಾಡಿತ್ತು. ನಾಗರಿಕರು ಹಿಡಿಯಲು ಯತ್ನಿಸಿದರೂ ವಿಫಲಗೊಂಡಿತು. ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಹಿಡಿಯುವಲ್ಲಿ ಯಶಸ್ವಿಯಾದರು.