ಮಂಗಳೂರು, ಮೇ. 31 (DaijiworldNews/TA): ಮಹಾನ್ ಮಾನವತಾವಾದಿ ಬ್ರಹ್ಮಶ್ರೀ ನಾರಾಯಣ ಗುರುಗಳು ಸಂಘಟನೆಯ ಮೂಲಕ ಒಗ್ಗಟ್ಟಾಗಿ ಬೆಳೆಯಿರಿ ಎಂಬ ಸಂದೇಶದಂತೆ ಇಂದು ಉದಯಪೂಜಾರಿ ಬಳ್ಳಾಲ್ಬಾಗ್ ನೇತೃತ್ವದ ಸ್ನೇಹಿತರ ಬಳಗವು ಬಿರುವೆರ್ ಕುಡ್ಲ ಸಂಸ್ಥೆಯ ಸಮಾಜದಲ್ಲಿ ಶಕ್ತಿಯುತವಾಗಿ ಬೆಳೆದು ಆಶಕ್ತರಿಗೆ ಬಲತುಂಬುವ ಕೆಲಸ ಮಾಡುತ್ತಿದೆ. ಇದರೊಂದಿಗೆ ಸ್ವಸ್ಥಿಕ್ ಆರ್ಯ ಅವರು ಕಾರುಣ್ಯ ಸೇತು ಫೌಂಡೇಷನ್ ಮೂಲಕ ಜತೆಗೂಡಿ ಇದೀಗ ಬಡವರ್ಗದ ನೆರವಿಗೆ ಧಾವಿಸಿರುವುದು ಶ್ಲಾಘನೀಯ ಎಂದು ರಾಜ್ಯದ ಬಿಜೆಪಿಯ ನಿಕಟಪೂರ್ವ ಅಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.










ಅವರು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಬಿರುವೆರ್ ಕುಡ್ಲ ಹಾಗೂ ನೂತನ ಕಾರುಣಸೇತು ಫೌಂಡೇಷನ್ ಜಂಟಿಯಾಗಿ ಸುಮಾರು 5 ಲಕ್ಷ ರೂ.ಮೊತ್ತದ ನೆರವನ್ನು ಹಾಗೂ ಕೃತಕ ಕಾಲುಜೋಡಣಾ ಸೌಲಭ್ಯವನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಫಲಾನುಭವಿಗಳಿಗೆ ಸೌಲಭ್ಯ ಹಸ್ತಾಂತರಿಸಿ ಮಾತನಾಡಿದರು. ಯುವ ಶಕ್ತಿಗಳು ಉತ್ತಮ ಸಮಾಜಕ್ಕಾಗಿ ಕೈಜೋಡಿಸಿದಾಗ ಎಂತಹ ಕೆಲಸವನ್ನಾದರೂ ಮಾಡಿತೋರಿಸಬಹುದು ಎಂಬುದಕ್ಕೆ ಬಿರುವೆರ್ ಕುಡ್ಲ ಉದಾಹರಣೆಯಾಗಿದೆ. ಇದರೊಂದಿಗೆ ಸ್ವಸ್ಥಿಕ್ ಆರ್ಯ ಅವರು ಕೈಜೋಡಿಸಿದ್ದು ಮುಂದಿನ ದಿನಗಳಲ್ಲಿ ಈ ಎರಡೂ ಸಂಘಟನೆಗಳು ಆಶಕ್ತರ ಕಣ್ಣೀರು ಒರೆಸುವ ಕೆಲಸ ಮಾಡಲು ಬ್ರಹ್ಮಶ್ರೀ ನಾರಾಯಣಗುರುಗಳು ಶಕ್ತಿ ನೀಡಲಿ ಎಂದರು.
ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮಾತನಾಡಿ, ಬಿರುವೆರ್ ಕುಡ್ಲ ಸಂಘಟನೆ ಸಮಾಜದ ಶಕ್ತಿಯಾಗಿ ಸ್ಪಂದನಾ ಸಂಸ್ಥೆಯನ್ನು ಹುಟುಹಾಕಿ ಇದರ ಮೂಲಕ ಪ್ರತೀ ತಿಂಗಳು ನೆರವು ಕೊಡುವ ಕಾರ್ಯಕ್ರಮ ಆದರ್ಶಯುತವಾದುದು ಈ ಸಂಘಟನೆ ಮತ್ತಷ್ಟು ಬಲಿಷ್ಟವಾಗಲಿ ಎಂದು ಹಾರೈಸಿದರು.ಶಾಸಕರಾದ ಹರೀಶ್ ಪೂಂಜಾ , ಶ್ರೀ ಗೋಕರ್ಣನಾಥ ಕ್ಷೇತ್ರದ ಮೊಕ್ತೇಸರ ಸಾಯಿರಾಮ್ , ಕೋಶಾಧಿಕಾರಿ ಪದ್ಮರಾಜ್ ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮಮತಾ ಗಟ್ಟಿ ಅವರು ಶುಭಹಾರೈಸಿದರು.
ಸಹನ ಕುಂದರ್ ಸೂಡಾ ಅವರು ಬಿರುವೆರ್ ಕುಡ್ಲ ಬೆಳೆದು ಬಂದ ಬಗ್ಗೆ ವಿವರಿಸಿ ಈ ಎರಡೂ ಸಂಘಟನೆಗಳು ಮತ್ತಷ್ಟು ಪರಿಣಾಮಕಾರಿಯಾಗಿ ಸಮಾಜಸೇವೆ ಮಾಡುವ ವಿಶ್ವಾಸ ವ್ಯಕ್ತ ಪಡಿಸಿದರು.
ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ಪೂಜಾರಿ ಬಳ್ಳಾಲ್ಬಾಗ್, ಕಾರುಣ್ಯ ಸೇತು ಫೌಂಡೇಷನ್ ಸ್ಥಾಪಕಾರದ ಸ್ವಸ್ಥಿಕ್ ಆರ್ಯ,ಬಿರುವೆರ್ ಕುಡ್ಲ ಅಧ್ಯಕ್ಷ ರಾಕೇಶ್ ಪೂಜಾರಿ, ಜಿತೇಶ್ ಜೈನ್, ದರ್ಶನ್ ಜೈನ್,ಬೋಳೂರು ಮೊಗವೀರ ಸಭಾ ಅಧ್ಯಕ್ಷರು ಯಶವಂತ್ ಮೆಂಡನ್ ಬೋಳೂರು,ಪ್ರವೀಣ್ ಬಗಂಬಿಲ, ಬಿಜೆಪಿ ಮುಖಂಡರು ವಸಂತ ಜೆ ಪೂಜಾರಿ, ಲತೀಶ್ ಪೂಜಾರಿ ಬಲ್ಲಾಲ್ ಬಾಗ್ , ಪ್ರಮೋದ್ ಬಲ್ಲಾಳ್ ಭಾಗ್,ರೇನಿತ್ ರಾಜ್,ರಾಕೇಶ್ ಚಿಲಿಂಬಿ, ಲೋಹಿತ್ ಗಟ್ಟಿ, ಧನರಾಜ್ ಪೂಜಾರಿ ಚಿಲಿಂಬಿ, ರಾಮ್ ಎಕ್ಕೂರು, ಮನೋಜ್ ಶೆಟ್ಟಿ, ದಿನಿಲ್,ಅಶ್ವಿನ್ ಪೂಜಾರಿ ಚಿಲಿಂಬಿ,ಗಿರೀಶ್ ಬತ್ತೇರಿ, ಗೌತಮ್ ಬತ್ತೇರಿ, ಕಿರಣ್ ಪೂಂಜೆರೆಕೋಡಿ, ನಾಮ್ ದೇವ್, ಮಹೇಶ್, ರಾಜೇಶ್ ಉರ್ವ, ಜಗದೀಶ್ ಅಶೋಕ ನಗರ,ಕಾರ್ಯದರ್ಶಿ ಕಿಶೋರ್ ಬಾಬು ಹಾಗೂ ಸಂಸ್ಥೆಯ ಪದಾಧಿಕಾರಿಗಳು ಹಿತೈಷಿಗಳು ಪ್ರೋತ್ಸಾಹಕರು ಉಪಸ್ಥಿತರಿದ್ದರು.
ನೆರವು ಪಡೆಸ ಫಲಾನುಭವಿಗಳು: ಶಂಕರ ಆಚಾರ್ಯ ಕೃತಕ ಕಾಲು ವಿತರಿಸಲಾಯಿತು,ಕಿಡ್ನಿ ವೈಪಲ್ಯದಿಂದ ಬಳಲುತ್ತಿರುವ ಭೂಷನ್ ಹಾಗೂ ಸ್ವಾತಿ ಹಾಗೂ ಸಬೀತಾ ಶಂಕರ್ ದೇರ್ ಬೈಲ್ ಕೊಂಚಾಡಿ, ಅಶೋಕ ನಗರ, ಕ್ಯಾನ್ಸರ್ ನಿಂದ ಬಳಲುತ್ತಿರುವ ಮಂಜುಳಾ ಕರ್ಕೇರ, ಹೃದಯಾಘಾತದಿಂದ ನಿಧನಹೊಂದಿದ ಕಾಮಿಡಿ ಕಿಲಾಡಿ ರಾಕೇಶ್ ಇವರ ಕುಟುಂಬಕ್ಕೆ ಸಾಂತ್ವಣ ನಿಧಿ, ಮಳೆಯಿಂದ ಮನೆಹಾನಿಗೊಂಡ ಧನಲಕ್ಷ್ಮಿ ಪುಂಚಮೆ ಇವರಿಗೆ, ರಕ್ತಸಂಭಂಧಿತ ಕಾಯಿಲೆ ಬಳಲುತ್ತಿರುವ ಪ್ರಣಯ್ ದೇವಾಡಿಗ ಹಾಗೂ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ಶ್ರೀನಿವಾಸ್ ಕುಲಾಲ್ ಪಚ್ಚನಾಡಿ ಇವರಿಗೆ ಹಸ್ತಾಂತರಸಲಾಯಿತು.
ಒಟ್ಟು 10ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಅಶಕ್ತ ಕುಟುಂಬಗಳ ಸಹಾಯಕ್ಕಾಗಿ ನೀಡಿದೆ. ಮನೆ ನಿರ್ಮಾಣ ಮಾತ್ರವಲ್ಲದೆ ಪ್ರತಿ ತಿಂಗಳು ಒಬ್ಬೊಬ್ಬ ಅನಾರೋಗ್ಯ ಪೀಡಿತರ ಚಿಕಿತ್ಸೆಗಾಗಿ 50 ಸಾವಿರ ಧನ ಸಹಾಯ ನೀಡುತ್ತಾ ಬಂದಿದೆ. ಇದರ ಜೊತೆ ಉಚಿತ ಆಂಬುಲೆನ್ಸ್ ಸೇವೆಯನ್ನು ಒದಗಿಸುತ್ತಿದೆ. ಈ ಸಂಘಟನೆಯಲ್ಲಿ ಮೂರು ಜಿಲ್ಲೆಯಲ್ಲಿ ಒಟ್ಟು 24 ಘಟಕಗಳಿದ್ದು ಇದರ ಸದಸ್ಯರೆಲ್ಲಾ ಒಟ್ಟು ಸೇರಿ ಸೇವಾ ಯೋಜನೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಯಾವುದೇ ಜಾತಿ, ಅದರ್ಮದ ಭೇದವಿಲ್ಲದೆ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶದಡಿ ಈ ಯುವಕರ ತಂಡ ಸೇವೆ ಮಾಡುತ್ತಿದೆ. ಈ ಸಂಘಟನೆಯ ನ್ನು ಮಾದರಿಯಾಗಿಟ್ಟುಕೊಂಡು ಹಲವು ಸಂಸ್ಥೆಗಳು ಇದೀಗ ಸೇವಾ ಕಾರ್ಯಕ್ಕೆ ಇಳಿಯುತ್ತಿವೆ.