ಮಂಗಳೂರು, ಮೇ. 03 (DaijiworldNews/TA): ಕಾವೂರು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ ಮೇಲೆ ಭಾರತೀಯ ನೀತಿ ಸಂಹಿತೆ ಪ್ರಕಾರ 189(2), 191(2), 115(2), 118(1), 352, 351(2) ಆರ್/ಡಬ್ಲ್ಯೂ ಸೆಕ್ಷನ್ 190ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ಬಂಧಿತ ಆರೋಪಿಗಳನ್ನು ಬಜ್ಪೆಯ ಲಿಖಿತ್(29), ಕುತ್ತಾರ್ನ ರಾಕೇಶ್(34),ಸುರತ್ಕಲ್ನ ಧನರಾಜ್ ಅಲಿಯಾಸ್ ಧನು, ಮೂಡುಬಿದಿರೆಯ ಪ್ರಶಾಂತ್ ಶೆಟ್ಟಿ (26) ಎಂದು ಗುರುತಿಸಲಾಗಿದೆ.
ಎಲ್ಲಾ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಇವರ ಛಾಯಾಚಿತ್ರ ಬಹಿರಂಗ ಪಡಿಸುವುದು ಸಮಂಜಸವಲ್ಲ ಅದು ಸಮಗ್ರ ತನಿಖೆಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.