ಕಾಸರಗೋಡು, ಏ.27(DaijiworldNews/TA): ಖಾಸಗಿ ಬಸ್ಸುಗಳ ನಡುವೆ ಉಂಟಾದ ಅಪಘಾತದಲ್ಲಿ 12 ಮಂದಿ ಗಾಯಗೊಂಡ ಘಟನೆ ರವಿವಾರ ಸಂಜೆ ಕಾಸರಗೋಡಿನ ಬ್ಯಾಂಕ್ ರಸ್ತೆಯಲ್ಲಿ ನಡೆದಿದೆ.

ಟೂರಿಸ್ಟ್ ಬಸ್ಸು ಮತ್ತು ಮಧೂರು - ಕಾಸರಗೋಡು ನಡುವೆ ಸಂಚಾರ ನಡೆಸುತ್ತಿರುವ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ನಡೆದಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ನಾಗರಿಕರು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ.
ಖಾಸಗಿ ಬಸ್ಸಿನ ಚಾಲಕ ಕಮಲಾಕ್ಷ ಗಂಭೀರ ಗಾಯ ಗೊಂಡಿದ್ದಾರೆ. ಮನ್ನಿಪ್ಪಾಡಿಯ ಸ್ವಪ್ನಾ (49) , ಅಲಂಪಾಡಿಯ ಮುಸ್ತಾಫಾ ( 40) , ಪಟ್ಲ ದ ಅಬ್ಬಾಸ್ (66) , ಟೂ ರಿಸ್ಟ್ ಬಸ್ಸು ಚಾಲಕ ವಿದ್ಯಾನಗರ ದ ಸಫೀರ್ (40), ಅಲಂಪಾಡಿಯ ಅಬ್ದುಲ್ ರಹಮಾನ್ ( 50), ಮೀಪುಗುರಿಯ ಸುರೇಶ್ (49), ಉಳಿಯ ತ್ತಡ್ಕ ದ ಸರಸ್ವತಿ (57) ಮೊದಲಾದವರು ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ.