ಮಂಗಳೂರು, ಏ.03(DaijiworldNews/TA) : ಶ್ರೀಮಂತ ರಾಜಗುಳಿಗ ಕ್ಷೇತ್ರ ಮೂಡುಮನೆಗುತ್ತು ಬಂದಲೆ ಪಚ್ಚನಾಡಿ ಇದರ ಮಹಾಕುಂಭಾಭಿಷೇಕ ಏಪ್ರಿಲ್ 4 ರಿಂದ 7 ರವರೆಗೆ ಶ್ರೀ ಕ್ಷೇತ್ರದಲ್ಲಿ ನಡೆಯಲಿದ್ದು ಈ ಪ್ರಯುಕ್ತ ವಿಜೃಂಭಣೆಯ ಹಸಿರು ಹೊರೆಕಾಣಿಕೆ ಮೆರವಣಿಗೆ ಕಾರ್ಯಕ್ರಮ ಮಂಗಳೂರಿನ ಪದವಿನಂಗಡಿ ದೇವಿನಗರದ ಶ್ರೀ ದುರ್ಗಾ ಕಟ್ಟೆಯಿಂದ ಶ್ರೀ ಕ್ಷೇತ್ರದ ವರೆಗೆ ನೆರವೇರಿತು. ಹಸಿರು ಹೊರೆ ಕಾಣಿಕೆ ಮೆರವಣಿಗೆಗೆ ಶ್ರೀ ದುರ್ಗ ಕಟ್ಟೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.





















ಈ ವೇಳೆ ಶ್ರೀಮಂತ ರಾಜಗುಳಿಗ ಕ್ಷೇತ್ರ ಮೂಡುಮನೆಗುತ್ತು ಬಂದಲೆ ಪಚ್ಚನಾಡಿ ಧರ್ಮದರ್ಶಿ ಸತೀಶ್ ಬಂದಲೆ ಮಾತನಾಡಿ ಏಪ್ರಿಲ್ 4ರಂದು ದೇವಿಯ ಸನ್ನಿಧಿಯಲ್ಲಿ ಚಂಡಿಕಾ ಯಾಗ, ನಾಗ ದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ ಪೂಜೆ, ನಾಗದರ್ಶನ ಸೇವೆ, ದುರ್ಗಾ ನಮಸ್ಕಾರ ಪೂಜೆ ಸೇರಿ ಸಭಾ ಕಾರ್ಯಕ್ರಮದೊಂದಿಗೆ ಕಥೆ ಎಡ್ಡೆ ಉಂಡು ನಾಟಕ ಪ್ರದರ್ಶನ, ಎಪ್ರಿಲ್ 5ರಂದು ಮಹಾ ಕುಂಬಾಭಿಷೇಕ, ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ, ಮತ್ತು ಶ್ರೀಮಂತ ರಾಜಗುಳಿಗ ದೈವದ ವಿಂಜ್ರಂಭಣೆಯ ಕೋಲೋತ್ಸವ ನಡೆಯಲಿದೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀಮಂತ ರಾಜಗುಳಿಗ ಕ್ಷೇತ್ರ ಮೂಡುಮನೆಗುತ್ತು ಬಂದಲೆ ಪಚ್ಚನಾಡಿ ಧರ್ಮದರ್ಶಿ ಸತೀಶ್ ಬಂದಲೆ, ಹಿಂದೂ ಮುಖಂಡರುಗಳಾದ ಸತ್ಯಜಿತ್ ಸುರತ್ಕಲ್, ಲೋಕೇಶ್ ಕೊಡಿಕೆರೆ, ಮಾಜಿ ಮೇಯರ್ ಜಯಾನಂದ್ ಅಂಚನ್, ಸಾಮಾಜಿಕ ಕಾರ್ಯಕರ್ತ ಮೋಹನ್ ಪಚ್ಚನಾಡಿ, ಪ್ರಮುಖರಾದ ಬಾಲಕೃಷ್ಣ ಕುಕ್ಯಾನ್, ಶೇಖರ್ ಪದವಿನಂಗಡಿ, ರಾಮ ಮುಗ್ರೋಡಿ, ನಟ ರಾಜ್ ಪಚ್ಚನಾಡಿ, ಕೀರ್ತಿ ಪ್ರಸಾದ್, ಜಗದೀಶ್ ಮುಂಡ ಪೂಜಾರಿ ಬಂದಲೆ ಮತ್ತಿತರರು ಉಪಸ್ಥಿತರಿದ್ದರು.