ವಾಷಿಂಗ್ಟನ್, ಆ. 05 (DaijiworldNews/AA): ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯು ಕ್ರೈಸ್ತರ ವಿರುದ್ಧದ ಸ್ಪಷ್ಟ ದಾಳಿ ಎಂದು ಎಫ್ಸಿಆರ್ಎ ತಿದ್ದುಪಡಿ ಮಾಡಲು ಮುಂದಾಗಿರುವ ಭಾರತ ಸರ್ಕಾರದ ವಿರುದ್ಧ ಅಮೆರಿಕದ ಸಂಸದ ರೈಲಿ ಮೂರ್ ತಿಳಿಸಿದ್ದಾರೆ.

ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, "ಈ ಮಸೂದೆಯು ಕ್ರಿಶ್ಚಿಯನ್ನರ ಮೇಲಿನ ಸ್ಪಷ್ಟ ದಾಳಿ. ಇದು ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳ ಮೇಲೆಯೂ ಪರಿಣಾಮ ಬೀರಬಹುದು. ಪ್ರಸ್ತಾವಿತ ತಿದ್ದುಪಡಿಗಳು ಸರ್ಕಾರಕ್ಕೆ ಚರ್ಚ್ಗಳು ಮತ್ತು ಧಾರ್ಮಿಕ ಚಾರಿಟಿ ಸಂಸ್ಥೆಗಳ ಆಸ್ತಿಗಳ ನಿಯಂತ್ರಣವನ್ನು ಪಡೆದುಕೊಳ್ಳಲು ಅವಕಾಶ ನೀಡುತ್ತವೆ" ಎಂದು ಎಚ್ಚರಿಸಿದ್ದಾರೆ.
ಪೋಸ್ಟ್ನಲ್ಲಿ ಭಾರತದಲ್ಲಿ ಕ್ರಿಶ್ಚಿಯನ್ ಧರ್ಮದ ದೀರ್ಘ ಇತಿಹಾಸವನ್ನು ಉಲ್ಲೇಖಿಸಿರುವ ಅವರು, "ಯೇಸುಕ್ರಿಸ್ತರ ಪುನರುತ್ಥಾನದ ಕೆಲವು ದಶಕಗಳ ನಂತರ ಸೇಂಟ್ ಥಾಮಸ್ ಅಪೋಸ್ಟಲ್ ಅವರು ಮಲಬಾರ್ ಕರಾವಳಿಗೆ ಪ್ರಯಾಣ ಬೆಳೆಸಿದಾಗಿನಿಂದಲೂ ಕ್ರಿಶ್ಚಿಯನ್ನರು ಭಾರತದಲ್ಲಿದ್ದಾರೆ. ಆದರೆ ಈ ಸುದೀರ್ಘ ಇತಿಹಾಸದ ಹೊರತಾಗಿಯೂ, ಚರ್ಚ್ಗಳು ಮತ್ತು ಧಾರ್ಮಿಕ ಚಾರಿಟಿಗಳ ಮೇಲಿನ ಸರ್ಕಾರಿ ಸ್ವಾಧೀನಕ್ಕೆ ಅವಕಾಶ ನೀಡಲು ಭಾರತದ ಸಂಸತ್ತು ವಿದೇಶಿ ಕೊಡುಗೆ ನಿಯಂತ್ರಣ ತಿದ್ದುಪಡಿ ನಿಯಮಗಳನ್ನು ಬದಲಾಯಿಸಲು ಪರಿಶೀಲಿಸುತ್ತಿದೆ. ಇದು ಕ್ರಿಶ್ಚಿಯನ್ನರ ಮೇಲಿನ ಸ್ಪಷ್ಟ ದಾಳಿಯಾಗಿದೆ. ಈ ಮಸೂದೆಯು ಇದೇ ರೀತಿ ಮುಂದುವರಿದರೆ, ಇದು ಭಾರತದೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧದಲ್ಲಿ ಪ್ರಮುಖ ಕಳವಳದ ವಿಷಯವಾಗಲಿದೆ" ಎಂದು ಪೋಸ್ಟ್ ಮಾಡಿದ್ದಾರೆ.