ಬೆಂಗಳೂರು, ಸೆ.9: ವರುಣನ ಆರ್ಭಟದಿಂದಾಗಿ ರಾಜಧಾನಿ ಬೆಂಗಳೂರು ಅಕ್ಷರಶಃ ತತ್ತರಿಸಿದೆ. ರಾತ್ರಿಯಿಡೀ ಮಳೆರಾಯ ನಗರದಲ್ಲಿ ಪ್ರತಾಪ ತೋರಿದ್ದು, ಸಾಕಷ್ಟು ಹಾನಿ ಸಂಭವಿಸಿದೆ.
ಬೆಂಗಳೂರು ನಗರದಲ್ಲಿ ಸರಾಸರಿ 26.27 ಮಿಮೀ ಮಳೆಯಾಗಿದ್ದು, ಎಡೆಬಿಡದೆ ಮಳೆ ಸುರಿದ ಪರಿಣಾಮ ಜನರು ಸಂಕಷ್ಟ ಅನುಭವಿಸುವಂತಾಗಿದೆ. ವರುಣನ ಆರ್ಭಟದಿಂದ ಬೆಂಗಳೂರು ನಗರದಲ್ಲಿ ಮರಗಳು ಹಾಗೂ ಕಟ್ಟಡಗಳು ಕುಸಿದು ಬಿದ್ದಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಬಾರಿ ಮಳೆ ಮತ್ತು ಗಾಳಿಗೆ ಮರವೊಂದು ಉರುಳಿ ಕಾರಿನ ಮೇಲೆ ಬಿದ್ದ ಪರಿಣಾಮ ಮಹಿಳೆ ಸೇರಿ ಮೂವರು ಮೃತಪಟ್ಟಿದ್ದಾರೆ.
![](https://daijiworld.ap-south-1.linodeobjects.com/iWeb/tvdaijiworld/img_tv247/09092017_bengaluru_rain.jpg)