ಕಾಸರಗೋಡು, ಮಾ 30(DaijiworldNews/AA): ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಸಮೀಪ ಪ್ರತ್ಯೇಕ ಅಪಘಾತ ನಡೆದಿದೆ. ಮೊದಲ ಅಪಘಾತದಲ್ಲಿ ಬೈಕ್ ಮತ್ತು ಕರ್ನಾಟಕ ಸಾರಿಗೆ ನಿಗಮದ ಬಸ್ಸು ಹಾಗೂ ಇನ್ನೊಂದು ಅಪಘಾತದಲ್ಲಿ ಕಾರುಗಳು ಮುಖಮುಖಿ ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡಿದ್ದಾರೆ.
![](https://daijiworld.ap-south-1.linodeobjects.com/Linode/img_tv247/AA-300324-accident.jpg)
ಕುಂಬಳೆ ಸೇತುವೆ ಬಳಿ ಸಾರಿಗೆ ಬಸ್ಸು ಮತ್ತು ಕಾರಿನ ನಡುವೆ ಅಪಘಾತ ನಡೆದಿದೆ. ಈ ಅಪಘಾತದಲ್ಲಿ ಮಂಜೇಶ್ವರದ ಸಮೀರ್ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಆರಿಕ್ಕಾಡಿ ಸಮೀಪ ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಯೂ ಚಾಲಕರಿಗೆ ಗೊಂದಲವಾಗಿ ಪರಿಣಮಿಸುತ್ತಿದ್ದು, ಅಪಘಾತಕ್ಕೆ ಕಾರಣವಾಗುತ್ತಿದೆ ಎನ್ನಲಾಗಿದೆ.