ಮಂಗಳೂರು,ಸೆ.08:ಪತ್ರಕರ್ತನ ಬಂಧನ ಖಂಡಿಸಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಪರ ಜಿಲ್ಲಾಧಿಕಾರಿ ಕುಮಾರ್ ಮತ್ತು ಪಶ್ವಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರಿಗೆ ಡಿವೈಎಸ್ಪಿ ಮೂಲಕ ಮನವಿ ಸಲ್ಲಿಸಲಾಯಿತು.
ಪೊಲೀಸರು ಕುರಾನ್ ಪವಿತ್ರ ಗ್ರಂಥಕ್ಕೆ ಅಪಪ್ರಚಾರ ಮಾಡಿದ್ದಾರೆ ಎನ್ನುವ ವರದಿ ಹಿನ್ನಲೆಯಲ್ಲಿ ನಿನ್ನೆಯ ದಿನ ಇಮ್ತಿಯಾಜ್ ತುಂಬೆ ಎನ್ನುವ ಪತ್ರಕರ್ತನನ್ನು ಬಂಟ್ವಾಳ ಠಾಣಾ ಪೊಲಿಸರು ಮಾತುಕತೆಗೆ ಎಂದು ಠಾಣೆಗೆ ಕರೆಸಿ ಬಳಿಕ ಬಂಧಿಸಿದ್ದಾರೆ. ಪೊಲೀಸರ ಈ ಒಂದು ಕ್ರಮದ ವಿರುದ್ಧ ಪತ್ರಕರ್ತರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
![](https://daijiworld.ap-south-1.linodeobjects.com/iWeb/tvdaijiworld/img_tv247/09092017_journalist_memo.jpg)
![](https://daijiworld.ap-south-1.linodeobjects.com/iWeb/tvdaijiworld/img_tv247/09092017_journalist_memo1.jpg)
ಈ ಸಂದರ್ಭ ದ.ಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ್ ಶೆಟ್ಟಿ ಬಾಳ, ಶ್ರೀನಿವಸ್ ಇಂದಾಜೆ, ಪುಪ್ಪರಾಜ್, ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಮೊದಲಾದವರು ಉಪಸ್ಥಿತರಿದ್ದರು.