ಕಾಸರಗೋಡು, ಅ 28 (DaijiworldNews/HR): ಪೆರಿಯದಲ್ಲಿರುವ ಕೇರಳ ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಪ್ರೊ. ವೆಂಕಟೇಶ್ವರಲು (64) ಇಂದು ಮುಂಜಾನೆ ಹೈದರಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
![](https://daijiworld.ap-south-1.linodeobjects.com/Linode/img_tv247/hr-281023-pro.jpg)
ಕರುಳು ಸಂಬಂಧಿರೋಗದಿಂದ ಕಳೆದ ಎರಡು ತಿಂಗಳಿನಿಂದ ವೆಂಕಟೇಶ್ವರಲು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
2020ರ ಆಗಸ್ಟ್ 14 ರಂದು ಪ್ರೊ. ವೆಂಕಟಟೇಶ್ವರಲು ಕೇರಳ ಕೇಂದ್ರ ವಿಶ್ವ ವಿದ್ಯಾನಿಲಯದ ಮೂರನೇ ಉಪ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದರು. 25 ವರ್ಷ ಗಳಿಂದ ಹೈದರಬಾದ್ ನ ಉಸ್ಮಾನಿಯಾ ವಿಶ್ವ ವಿದ್ಯಾನಿಲಯದ ಕಾಮರ್ಸ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದರು.