ಮಂಗಳೂರು, ಅ 27 (DaijiworldNews/HR): ಸುರತ್ಕಲ್ ಮಾರ್ಕೆಟ್ ಮುಂದೆಯೇ ಕೊಳಚೆ ತ್ಯಾಜ್ಯ ನೀರು ಹರಿಯುತ್ತಿದ್ದು, ಮನಪ ಸದಸ್ಯರಿಗೆ, ಅಧಿಕಾರಿಗಳಿಗೆ ಮನವಿ ಮಾಡಿದ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
![](https://daijiworld.ap-south-1.linodeobjects.com/Linode/img_tv247/hr-271023-surs.jpg)
![](https://daijiworld.ap-south-1.linodeobjects.com/Linode/img_tv247/hr-271023-surs1.jpg)
![](https://daijiworld.ap-south-1.linodeobjects.com/Linode/img_tv247/hr-271023-surs2.jpg)
ಕಳೆದ ಹಲವಾರು ವರ್ಷಗಳಿಂದ ಈ ಭಾಗದ ರಸ್ತೆ ಮೇಲೆ ತ್ಯಾಜ್ಯ ನೀರು ಹರಿಯುತ್ತಿದ್ದು, ರಸ್ತೆ ಬದಿ ಇರುವ ಮನಪ ತ್ಯಾಜ್ಯ ವಾಹನದಿಂದ, ಸ್ಥಳೀಯ ಮಾರ್ಕೆಟ್ ತ್ಯಾಜ್ಯ ರಾಶಿಯಿಂದ ಜನರಿಗೆ ಸಮಸ್ಯೆಯಾಗುತ್ತಿದೆ.
ಇನ್ನು ಸ್ಥಳೀಯ, ವ್ಯಾಪಾರಸ್ಥರು ದುರ್ವಾಸನೆ, ರೋಗ ಭಿತಿಯಲ್ಲಿ ಬದುಕುತ್ತಿದ್ದು, ಅಧಿಕಾರಿಗಳು, ಮನಪ ಸದಸ್ಯರು ಈ ಬಗ್ಗೆ ಉಡಾಪೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಪಿಸಲಾಗಿದೆ.