ನವದೆಹಲಿ, ಮಾ 17 (DaijiworldNews/DB): ನಮ್ಮ ದೇಶದ ಪ್ರಜಾಪ್ರಭುತ್ವದ ರಕ್ಷಣೆಗೆ ರಾಹುಲ್ ಗಾಂಧಿಯವರು ವಿದೇಶಿ ಶಕ್ತಿಗಳನ್ನು ಕೇಳಿಕೊಂಡಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
![](https://daijiworld.ap-south-1.linodeobjects.com/Linode/img_tv247/DB-06032023-shashi.jpg)
ಸುದ್ದಿಸಂಸ್ಥೆಯೊಂದರ ಜೊತೆ ಶುಕ್ರವಾರ ಮಾತನಾಡಿದ ಅವರು, ವಿದೇಶಿ ಶಕ್ತಿಗಳೊಂದಿಗೆ ನಮ್ಮ ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಲು ರಾಹುಲ್ ಗಾಂಧಿ ಕೇಳಿಕೊಂಡಿಲ್ಲ. ಆದರೆ ಅವರು ಏನೂ ಹೇಳದಿದ್ದರೂ ಅವರ ಕ್ಷಮೆ ಯಾಚನೆಗೆ ಬಿಜೆಪಿ ಒತ್ತಾಯಿಸುತ್ತಿದೆ. ಇದು ನಾನ್ಸೆನ್ಸ್ ಎಂದರು.
ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿರುವುದು ನಿಜ. ಪ್ರತಿಯೊಬ್ಬರೂ ಇದನ್ನು ತಿಳಿದುಕೊಳ್ಳಬೇಕು ಎಂದವರು ಇದೇ ವೇಳೆ ಹೇಳಿದರು.
ಇನ್ನು ಸಂಸತ್ತಿನ ಬಜೆಟ್ ಅಧಿವೇಶನ ಕುರಿತಂತೆ ಮಾತನಾಡಿದ ಅವರು, ಸಂಸತ್ನ ಕಾರ್ಯಕಲಾಪಗಳು ಯಾವುದೇ ತೊಂದರೆ ಇಲ್ಲದಂತೆ ನಡೆಯಬೇಕು. ಇದು ಸರ್ಕಾರದ ಜವಾಬ್ದಾರಿ ಕೂಡಾ ಆಗಿದೆ. ಹಣಕಾಸು ವಿಧೇಯಕ ಅಂಗೀಕಾರ ಸಹಿತ ಹಲವು ಪ್ರಮುಖ ಅಂಶಗಳು ಈ ಬಜೆಟ್ನಲ್ಲಿ ನಿರ್ಧಾರವಾಗಬೇಕಿದೆ. ಹೀಗಿರುವಾಗ ಕಾರ್ಯ ಕಲಾಪಗಳಿಗೆ ಅವಕಾಶ ನೀಡದಿರುವುದು ಸರಿಯಲ್ಲ ಎಂದವರು ತಿಳಿಸಿದರು.