ಆಂಧ್ರಪ್ರದೇಶ,ಮಾ.14(AZM):ಭಕ್ತಿ ಪ್ರಧಾನ ಚಿತ್ರವಾಗಿರುವ ಅಯ್ಯಪ್ಪ ಸ್ವಾಮಿ ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿಯವರು ಮಹತ್ವದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
![](https://daijiworld.ap-south-1.linodeobjects.com/iWeb/tvdaijiworld/img_tv247/azm_130319_anushka.jpg)
ಕಲಿಯುಗದ ದೇವ ಎಂದು ನಂಬುವ ಅಯ್ಯಪ್ಪ ಸ್ವಾಮಿಯ ಹಲವು ಚಿತ್ರಗಳು,ಧಾರವಾಹಿಗಳು ಮಲಯಾಳಂ,ತಮಿಳು ಹಾಗೂ ಕನ್ನಡ ಭಾಷೆಯಲ್ಲಿ ಈಗಾಗಲೇ ಬಂದಿದೆ. ಇದೀಗ ಖ್ಯಾತ ಸಿನಿಮಾ ನಿರ್ದೇಶಕ ಸಂತೋಷ್ ಸಿವನ್ ಅವರು ಅಯ್ಯಪ್ಪ ಸ್ವಾಮಿಯ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ, ಶ್ರೀ ಗೋಕುಲಂ ಅವರು ಚಿತ್ರದ ನಿರ್ಮಾಪಕರಾಗಿದ್ದು,ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್ ರಹಮಾನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಅರುಂಧತಿ, ರುದ್ರಮದೇವಿ, ಬಾಹುಬಲಿ, ಭಾಗಮತಿ ಮುಂತಾದ ಸಿನಿಮಾಗಳಲ್ಲಿ ನಟಿಸಿ ಜನರ ಮನಸ್ಸನ್ನು ಗೆದ್ದಿರುವ ಅನುಷ್ಕಾ ಶೆಟ್ಟಿಯವರು ಸದ್ಯಕ್ಕೆ ಸೈಲೆನ್ಸ್ ಎಂಬ ಸಿನಿಮಾ ಶೂಟಿಂಗ್ನಲ್ಲಿ ಬಿಝಿಯಾಗಿದ್ದಾರೆ. ಇದರ ಜತೆಗೆಯೇ ಅವರು ಸಂತೋಷ್ ಸಿವನ್ರ ಅಯ್ಯಪ್ಪ ಸ್ವಾಮಿ ಚಿತ್ರದ ಶೂಟಿಂಗ್ನಲ್ಲಿ ಪಾಲ್ಗೊಳ್ಳಲಿದ್ದು, ಅವರ ಪಾತ್ರವೇನು? ಎಂಬುವುದನ್ನು ಕಾದುನೋಡಬೇಕಾಗಿದೆ.
ಸಿನಿಮಾ ಪ್ರಿಯರಲ್ಲಿ ತುಂಬಾ ನಿರೀಕ್ಷೆ ಮೂಡಿಸಿರುವ ಅಯ್ಯಪ್ಪ ಸ್ವಾಮಿ ಕುರಿತಾದ ಈ ಸಿನಿಮಾ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದೆ ಭಾಷೆಗಳಲ್ಲಿ ಈ ವರ್ಷಾಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.