ಬೆಂಗಳೂರು, ಮಾ 03 (MSP): ಶಾಂತಿನಗರ ಸ್ಮಶಾನದಲ್ಲಿ "ಭೈರಾದೇವಿ" ಕ್ಲೈಮ್ಯಾಕ್ಸ್ ಶೂಟಿಂಗ್ ಸಂದರ್ಭ ಬೆನ್ನು ಮೂಳೆಗೆ ಗಾಯಮಾಡಿಕೊಂಡಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಇದೀಗ ಚೇತರಿಸಿಕೊಂಡಿದ್ದು ಮತ್ತೆ ತಮ್ಮ ಗಮನವನ್ನು ಚಿತ್ರೀಕರಣದತ್ತ ಹರಿಸಿದ್ದಾರೆ. ಇದೇ ಮಾರ್ಚ್ 5ರಿಂದ ರಾಧಿಕಾ "ದಮಯಂತಿ" ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.
![](https://daijiworld.ap-south-1.linodeobjects.com/iWeb/tvdaijiworld/img_tv247/msp-030319-radhika.jpg)
ಹಲವು ದಿನಗಳ ವಿಶ್ರಾಂತಿಯ ಬಳಿಕ ನಟಿ ಮತ್ತೆ ಎರಡು ಚಿತ್ರಗಳ ಶೂಟಿಂಗ್ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಬಯಸಿದ್ದಾರೆ. ಭೈರಾದೇವಿ ಚಿತ್ರದಲ್ಲಿ ರಾಧಿಕಾ ಅಘೋರಿ ರೂಪ ತಾಳಿದ್ದಾರೆ.ಮಾತ್ರವಲ್ಲದೆ ಕಾಳಿ ಅವತಾರದಲ್ಲೂ ಅವರು ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಶ್ರೀಜಿ ನಿರ್ದೇಶನದ ಈ ಚಿತ್ರ ರಾಧಿಕಾ ಕುಮಾರಸ್ವಾಮಿ ಅವರ ಹೋಮ್ ಬ್ಯಾನರ್, ಶಮಿಕಾ ಎಂಟರ್ ಪ್ರೈಸಸ್ ಲಾಂಛನದಡಿ ಮೂಡಿಬರುತ್ತಿದೆ.ವಿಶೇಷವೆಂದರೆ ಈ ಚಿತ್ರದಲ್ಲಿ ರಮೇಶ್ ಅರವಿಂದ್ ಪೋಲೀಸ್ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಮಾರ್ಚ್ 17ರ ನಂತರ ಪುನಾರಂಭಗೊಳ್ಳಲಿದೆ.
ಇನ್ನು ನವರಸನ್ ನಿರ್ದೇಶನದ "ದಮಯಂತಿ" ಎಂಬತ್ತರ ದಶಕದ ಕಥಾನಕವಾಗಿದ್ದು ಇದರಲ್ಲಿ ಸಹ ರಾಧಿಕಾ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.