ಢಾಕಾ, ಡಿ 10 (DaijiworldNews/DB): ಬಾಂಗ್ಲಾದೇಶದ ವಿರುದ್ದ ಮೂರನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾ ಗೆಲುವಿಗೆ ಭಾರತ ಕಠಿಣ ಸವಾಲಿನ ಗುರಿ ನೀಡಿದೆ.
![](https://daijiworld.ap-south-1.linodeobjects.com/Linode/img_tv247/DB-10122022-ind.jpg)
ಚಿತ್ತಗಾಂಗ್ನ ಜಹಾರ್ ಅಹಮದ್ ಚೌಧರಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾ ವಿರುದ್ದದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಉತ್ತಮ ಪರಾಕ್ರಮ ತೋರಿದ್ದು, ಇಶಾನ್ ಕಿಶಾನ್ ಅವರ ದ್ವಿಶತಕ (210) ಮತ್ತು ವಿರಾಟ್ ಕೊಹ್ಲಿಯ ಶತಕ (113) ದಿಂದಾಗಿ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಭಾರತ ತಂಡ 409 ರನ್ ಪೇರಿಸಿದೆ. ಆ ಮೂಲಕ ಬಾಂಗ್ಲಾ ಕಲಿಗಳಿಗೆ ಗೆಲುವಿನ ಬೆನ್ನತ್ತಲು 410 ರನ್ಗಳ ಗುರಿ ನೀಡಿದೆ.
ಈಗಾಗಲೇ ಮೊದಲೆರಡು ಪಂದ್ಯಗಳಲ್ಲಿ ಸೋತು ಸರಣಿ ಕಳೆದುಕೊಂಡಿರುವ ಭಾರತ ತಂಡಕ್ಕೆ ಈ ಪಂದ್ಯ ಪ್ರತಿಷ್ಠೆಯೂ ಆಗಿದೆ.