ಕಾಸರಗೋಡು, ಸೆ 24 (MSP) : ಪ್ರಜ್ಞೆ ತಪ್ಪಿಸಿ ಪ್ರಯಾಣಿನೋರ್ವನ ನಗ - ನಗದು ದರೋಡೆಗೈದ ಘಟನೆ ಹಾಪಾ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿದೆ. ಮುಂಬೈಯಿಂದ ಊರಿಗೆ ರೈಲಿನಲ್ಲಿ ಮರಳುತ್ತಿದ್ದ ಪಾಲಕ್ಕಾಡ್ ನ ಅರುಣ್ ಎಂಬವರು ದರೋಡೆಗೊಳಗಾದವರು. ಉದ್ಯೋಗ ಅರಸಿಕೊಂಡು ಕೆಲ ದಿನಗಳ ಹಿಂದೆ ಅರುಣ್ ಮುಂಬೈ ಗೆ ತೆರಳಿದ್ದು, ಅಲ್ಲಿ ಕೆಲಸ ಸರಿಯಾದಾಗ ಹಿನ್ನಲೆಯಲ್ಲಿ ಹಾಪಾ ಎಕ್ಸ್ ಪ್ರೆಸ್ ರೈಲಿ ನಲ್ಲಿ ಮರಳುತ್ತಿದ್ದಾಗ ಘಟನೆ ನಡೆದಿದೆ.
![](https://daijiworld.ap-south-1.linodeobjects.com/iWeb/tvdaijiworld/img_tv247/trin-thifet240918.jpg)
ರೈಲಿನಲ್ಲಿ ಹಿಂದಿ ಮಾತನಾಡುವ ಪ್ರಯಾಣಿಕನೋರ್ವ ಪರಿಚಯವಾಗಿದ್ದು, ದಾರಿ ಮಧ್ಯೆ ಈತ ಬಿಸ್ಕೆಟ್ ನೀಡಿದ್ದು , ಅದನ್ನು ಸೇವಿಸಿದ ಬಳಿಕ ಈತ ಪ್ರಜ್ಞೆ ತಪ್ಪಿದ್ದು , ಇಂದು ಬೆಳಿಗ್ಗೆ ಕಾಸರಗೋಡಿಗೆ ತಲುಪಿದಾಗ ಪ್ರಜ್ಞೆ ಮರಳಿತ್ತು ಎಂದು ಅರುಣ್ ತಿಳಿಸಿದ್ದಾರೆ. ಅರುಣ ಧರಿಸಿದ್ದ ಒಂದೂವರೆ ಪವನ್ ಚಿನ್ನಾಭರಣ , ಎರಡು ಸಾವಿರ ರೂಪಾಯಿ ನಗದು , ಎಟಿಎಂ ಕಾರ್ಡು ಮೊದಲಾದವು ಒಳಗೊಂಡ ಪರ್ಸ್ ನ್ನು ದರೋಡೆ ಮಾಡಲಾಗಿದೆ. ಕಾಸರಗೋಡು ನಿಲ್ದಾಣದಲ್ಲಿ ರೈಲ್ವೆ ಪೊಲೀಸರಿಗೆ ಅರುಣ್ ಮಾಹಿತಿ ನೀಡಿದ್ದು , ಬಳಿಕ ಪೊಲೀಸರು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.