ಕಾಸರಗೋಡು, ಮೇ 03 (DaijiworldNews/SM) : ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮೇ 9 ವರೆಗೆ ಅನಿವಾರ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲ ಚಟುವಟಿಕೆಗಳಿಗೂ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿದೆ.
ಕೇಂದ್ರ- ರಾಜ್ಯ ಸರಕಾರಿ ಸಂಸ್ಥೆಗಳು, ಅವುಗಳ ಸ್ವಾಮ್ಯದಲ್ಲಿರುವ ಸ್ಥಳೀಯಾಡಳಿತ ಸಂಸ್ಥೇಗಳು, ಅನಿವಾರ್ಯ ವಿಭಾಗಗಳು, ಕೋವಿಡ್ ಪ್ರತಿರೋಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸಿಬ್ಬಂದಿ, ವ್ಯಕ್ತಿಗಳು ಮೊದಲಾದವರ ಚಟುವಟಿಕೆಗಳಿಗೆ ತಡೆಯಿಲ್ಲ ಎಂದು ತಿಳಿಸಲಾಗಿದೆ. ಉಳಿದಂತೆ ಸಂಸ್ಥೆಗಳಲ್ಲಿ ಅನಿವಾರ್ಯ ಸಿಬ್ಬಂದಿ ಮಾತ್ರ ಹಾಜರಾಗಬೇಕು. ಇಂಥಾ ಸಂಸ್ಥೆಗಳಲ್ಲಿ ಅಗತ್ಯಕ್ಕಿಂತ ಅಧಿಕ ಸಿಬ್ಬಂದಿ ಇರುವಂತಿಲ್ಲ.
ಅನಿವಾರ್ಯ ಸೇವೆ ಸಂಬಂಧ ಕಂಪನಿಗಳು, ಉದ್ದಿಮೆ ಸಂಸ್ಥೆಗಳು, ಸಂಘಟನೆಗಳು ಸಹಿತ 24 ತಾಸೂ ಚಟುವಟಿಕೆ ನಡೆಸಬಹುದು. ಆದರೆ ಇಂತಾ ಸಂಸ್ಥೆಗಳ ಸಿಬ್ಬಂದಿಯ ಪ್ರಯಾಣದ ಸಂದರ್ಭದಲ್ಲಿ ಸಂಸ್ಥೆಗಳು ಮಂಜೂರು ಮಾಡುವ ಸೂಕ್ತ ರೀತಿಯ ಗುರುತು ಪತ್ರಗಳನ್ನು ಹೊಂದಿರಬೇಕು.
ಆಕ್ಸಿಜನ್ ತಂತ್ರಜ್ಞರು, ಆರೋಗ್ಯ-ಶುಚೀಕರಣ ವಲಯಗಳ ಕಾರ್ಯಕರ್ತರು ಮೊದಲಾದವರು ಗುರುತುಚೀಟಿ ಕಡ್ಡಾಯವಾಗಿ ಹೊಂದಿರಬೇಕು. ಟೆಲಿಕಾಂ ಸರ್ವೀಸ್, ಮೂಲಬೂತ ಸೌಲಭ್ಯ, ಇಂಟರ್ ನೆಟ್ ಸೇವೆದಾತರು, ಪೆಟ್ರೋನೆಟ್, ಪೆಟ್ರೋಲಿಯಂ, ಎಲ್.ಪಿ.ಜಿ. ಯೂನಿಟ್ ಗಳು ಇತ್ಯಾದಿಗಳನ್ನು ಸೇವೆ ವಿಭಾಗದಲ್ಲಿ ಅಳವಡಗೊಳಿಸಲಾಗಿದೆ. ಇವರು ಆಯಾ ಸಂಸ್ಥೆಗಳು ನೀಡುವ ಗುರುತುಚೀಟಿ ಸಹಿತ ಪ್ರಯಾಣಿಸಬಹುದು. ರೋಗಿಗಳು, ಅವರ ಜತೆಗಿರುವವರು, ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆ ಫಾರ್ಮಸಿಗಳು, ಪತ್ರಿಕಾ ಮಾಧ್ಯಮಗಳು, ಹಾಲು- ಹಾಲು ಉತ್ಪನ್ನಗಳು ಇತ್ಯಾದಿ ಕೇಂದ್ರಗಳು, ಮೀನು-ಮಾಂಸ ಮಾರಾಟ ಕೇಂದ್ರಗಳು, ಶೇಂದಿ ಅಂಗಡಿಗಳು ಇತ್ಯಾದಿ ಮಾತ್ರ ಚಟುವಟಿಕೆ ನಡೆಸಬಹುದು. ಸಾರ್ವಜನಿಕರು ಮನೆಯಿಂದ ಹೊರಗಿಳಿದು ಸಾಮಾಗ್ರಿ ಖರೀದಿ ಮಾಡುವುದಕ್ಕಿಂತ ಹೋಂ ಡೆಲಿವರಿ ವ್ಯವಸ್ಥೆಗಳಿಗೆ ಪ್ರೋತ್ಸಾಹ ನೀಡಬೇಕು. ಎಲ್ಲ ಸಂಸ್ಥೆಗಳಲ್ಲಿ ಸಿಬ್ಬಂದಿ, ಮಾಲೀಕರು ಅವಳಿ ಮಾಸ್ಕ್ ಧರಿಸಬೇಕು. ರಾತ್ರಿ 9 ಗಂಟೆಗೆ ಮುನ್ನ ಅಂಗಡಿಗಳು ಮುಚ್ಚುಗಡೆಗೊಳ್ಳಬೇಕು. ರೆಸ್ಟಾರೆಂಟ್ ಗಳಲ್ಲಿ, ಆಹಾರ ಸಂಸ್ಥೆಗಳಲ್ಲಿ ಪಾರ್ಸೆಲ್ ವಿತರಣೆ ಮಾತ ಅನುಮತಿಯಿದೆ. ಇಂಥಾ ಸಂಸ್ಥೆಗಳೂ ರಾತ್ರಿ 9 ಗಂಟೆಗೆ ಮುಚ್ಚುಗಡೆಗೊಳ್ಳಬೇಕು. ಬ್ಯಾಂಕ್ ಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ವರೆಗೆ ಮಾತ್ರ ಸಾರ್ವಜನಿಕರಿಗಾಗಿ ಚಟುವಟಿಕೆ ನಡೆಸಲಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.