ಕಾರ್ಕಳ, ಮೇ. 03 (DaijiworldNews/HR): ಚಿರತೆಗಳೆರಡು ನಡೆಸಿದ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಿರತೆಯೊಂದು ಪ್ರಾಣತೆತ್ತಿರುವ ಘಟನೆ ದುರ್ಗ ಗ್ರಾಮದ ಕಡಂಬಳ ಮೀಸಲು ಅರಣ್ಯದಲ್ಲಿ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಸುಮಾರು ಆರು ವರ್ಷ ಪ್ರಾಯದ ಚಿರತೆ ಘಟನಾ ಸ್ಥಳದಲ್ಲಿ ಸತ್ತು ಬಿದಿದ್ದು, ಅದರ ದೇಹದ ಮೇಲ್ಭಾಗದಲ್ಲಿ ಗಾಯಗಳ ಗುರುತು ಕಂಡು ಬಂದಿದ್ದು, ಇದು ಚಿರತೆಗಳ ಕಾದಾಟದಲ್ಲಿ ಉಂಟಾಗಿರಬಹುದು ಎನ್ನಲಾಗಿದೆ.
ಇನ್ನು ಇದೇ ಪರಿಸರದಲ್ಲಿ ಅಸಂಖ್ಯಾತ ಚಿರೆತೆಗಳಿದ್ದು, ಆಗೊಮ್ಮೆ- ಹೀಗೊಮ್ಮೆ ಜನವಸತಿ ಪ್ರದೇಶಗಳಲ್ಲಿ ಸಂಚಾರಿಸುವ ಮೂಲಕ ಸುದ್ದಿಯಾಗುತ್ತಿವೆ.
ಗಾಯಗೊಂಡು ಎದ್ದೇಳುವ ಸ್ಥಿತಿಯಲ್ಲಿಲ್ಲದ ಚಿರತೆಗೆ ತಿನ್ನಲು ಆಹಾರ ಸಿಗದೇ, ಗಾಯದಿಂದ ನೋವಿನಿಂದ ಪ್ರಾಣ ಕಳೆದುಕೊಂಡಿರಬೇಕು ಎಂದು ಆರ್ಎಫ್ಓ ದಿನೇಶ್ ತಿಳಿಸಿದ್ದಾರೆ.