ಮಂಗಳೂರು, ಮೇ.03 (DaijiworldNews/PY): "ಕಳೆದ ಆರು ವರ್ಷಗಳಲ್ಲಿ ಜಾತಿ ಬೇಧವಿಲ್ಲದೆ ನೂರಾರು ಕುಟುಂಬಗಳಿಗೆ ದಾನಿಗಳ ನೆರವಿನಿಂದ ಬೃಹತ್ ಮೊತ್ತದ ಆರ್ಥಿಕ ನೆರವು ನೀಡುವ ಮೂಲಕ ಫ್ರೆಂಡ್ಸ್ ಬಳ್ಳಾಲ್ ಭಾಗ್, ಬಿರುವೆರ್ ಕುಡ್ಲ ಸಂಘಟನೆ ಬಾಂಧವ್ಯ ಬೆಸೆಯುವ ಕೆಲಸದೊಂದಿಗೆ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ" ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ನೀರಜಾಕ್ಷಿ ಅವರ ಕಿಡ್ನಿ ಸಮಸ್ಯೆಯ ವೈದ್ಯಕೀಯ ಚಿಕಿತ್ಸೆಗೆ 50 ಸಾವಿರ ರೂ.ಚೆಕ್ ವಿತರಿಸಿ ಮಾತನಾಡಿದರು.
"ಪ್ರತೀ ತಿಂಗಳು ಸಂಘಟನೆಗೆ ನೆರವು ಕೋರಿ ಐವತ್ತಕ್ಕೂ ಅಧಿಕ ಪತ್ರ ಬಂದಿದೆ ಎಂದು ಸದಸ್ಯರು ಮಾಹಿತಿ ನೀಡಿದ್ದು, 50 ಸಾವಿರ ರೂ. ನೀಡುತ್ತಿದೆ. ಇತರ ಸಂಘಟನೆಗಳು, ದಾನಿಗಳು ಬಿರುವೆರ್ ಕುಡ್ಲದೊಂದಿಗೆ ಸೇರಿ ಬಡವರಿಗೆ ನೆರವು ವಿತರಿಸಲು ಮುಂದೆ ಬರಬೇಕು" ಎಂದರು.
"ದೇವಸ್ಥಾನದ ಆಡಳಿತ ಮೊಕ್ತೇಸರ ಸಾಯಿರಾಂ, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್ ಅವರು ಬಿರುವೆರ್ ಕುಡ್ಲ ಸಂಘಟನೆಯು ಜಾತ್ಯಾತೀತವಾಗಿ ನೆರವಾಗಿ ಇತರ ಸಂಘಟನೆಗಳಿಗೆ ಪ್ರೋತ್ಸಾಹ ನೀಡುತ್ತಿದೆ" ಎಂದರು.
ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಭಾಗ್, ವಸಂತ ಪೂಜಾರಿ, ಜಗದೀಪ್ ಸುವರ್ಣ, ರಾಕೇಶ್ ಪೂಜಾರಿ ಬಳ್ಳಾಲ್ ಭಾಗ್, ಶೇಖರ್ ಪೂಜಾರಿ, ರಾಕೇಶ್ ಸಾಲ್ಯಾನ್ ಚಿಲಿಂಬಿ, ಲೋಹಿತ್ ಗಟ್ಟಿ, ಕಿಶೋರ್ ಬಾಬು, ರಾಮ್ ಪ್ರಸಾದ್ ಎಕ್ಕೂರು, ಲಕ್ಷ್ಮೀಶ್ ಸುವರ್ಣ, ರೋಶನ್ ಮಿನೇಜಸ್, ಪ್ರಾಣೇಶ್ ಬಂಗೇರ, ದಿನಿಲ್ ಬಳ್ಳಾಲ್ ಭಾಗ್, ಗಣೇಶ್ ಚಿಲಿಂಬಿ, ಕಿರಣ್ ಉರ್ವ, ಯಶ್ವಿನ್ ಬಳ್ಳಾಲ್ ಭಾಗ್, ದೀರಜ್ ಚಿಲಿಂಬಿ, ಚೇತನ್ ರಾಜ್ ಗೌಡ, ಸುಶಾನ್ ಬಳ್ಳಾಲ್ ಭಾಗ್, ರಕ್ಷಣ್ ಬಳ್ಳಾಲ್ ಭಾಗ್, ಸುನೀಲ್ ಶೆಟ್ಟಿ ಬಳ್ಳಾಲ್ ಭಾಗ್, ಓಸ್ವಾಲ್ಡ್ ಡಿಸೋಜ, ರಕ್ಷಿತ್ ಬಿರ್ವ ಉಪಸ್ಥಿತರಿದ್ದರು.