ಉಡುಪಿ, ಮೇ 2 (DaijiworldNews/MS): ಉಡುಪಿಯ ಸಂತೆಕಟ್ಟೆಯಲ್ಲಿ ಸರಕಾರದ ರೂಲ್ಸ್ ಗಳನ್ನ ಗಾಳಿಗೆ ತೂರಿ ಜನ ತರಕಾರಿ ಖರೀದಿಗೆ ಮುಗಿ ಬಿದ್ದ ದೃಶ್ಯ ಏ.೨ರ ಭಾನುವಾರ ಮುಂಜಾನೆ ಕಂಡು ಬಂದಿದೆ. ಕೊರೊನಾ ಮಹಾಮಾರಿ ನಿಯಂತ್ರಕ್ಕೆ ಸರಕಾರ ನೀಡಿರುವ ಮಾರ್ಗ ಸೂಚಿಯಂತೆ ಸಂತೆ ಮಾರುಕಟ್ಟೆ ತೆರೆಯಲು ನಿರ್ಭಂಧ ಹೇರಿದೆ .ಅದರೆ ವ್ಯಾಪಾರಿಗಳು ಮಾತ್ರ ಸಂತೆ ಮಾರುಕಟ್ಟೆಯ ಹೊರಗಡೆಯ ರಸ್ತೆ ಬದಿಯಲ್ಲಿ ತರಕಾರಿ ಮಾರಾಟಕ್ಕೆ ಮುಂದಾಗಿದ್ದಾರೆ.
ಸಾರ್ವಜನಿಕರೂ ಕೂಡ ಸಾಮಾಜಿಕ ಅಂತರವನ್ನು ಮರೆತು ತರಕಾರಿ ಖರೀದಿಗೆ ಮುಗಿ ಬಿದ್ದಿದ್ದಾರೆ. ಒಂದಷ್ಟು ಜನ ಪೊಲೀಸರು ಇಲ್ಲಿ ಕರ್ತವ್ಯಕಿದ್ದರೂ ಕೂಡ ಜನರನ್ನು ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ. ಪೊಲೀಸರು ಮೈಕ್ ಗಳ ಮೂಲಕ ಮನವಿ ಮಾಡಿದ್ರೂ ಜನ ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ.
ಇಷ್ಟಾದರೂ ನಗರ ಸಭೆ ಅಧಿಕಾರಿಗಳು ಇತ್ತ ಸುಳಿಯಲೇ ಇಲ್ಲವೆಂದು ಆರೋಪಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರೊಬ್ಬರು ನಗರ ಸಭೆ ಕಚೇರಿಗೆ ತೆರಳಿ ದೂರು ನೀಡಿದಾಗ ,ದೂರುದಾರರಿಗೆ ನಗರ ಸಭೆ ಸಿಬಂದಿಯೊಬ್ಬರು ಬೆದರಿಸಿದ್ದಾರೆ ಎನ್ನುವ ಅರೋಪಗಳು ಕೇಳಿ ಬಂದಿದೆ.