ಮಂಗಳೂರು, ಮೇ 01 (DaijiworldNews/SM): ಇಲ್ಲಿನ ನೇತ್ರಾವತಿ ನದಿ ಸೇತುವೆಯಲ್ಲಿ ಕಾರಿನಲ್ಲಿ ಬಂದು ನದಿಗೆ ಕಸ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರನ್ನು ಕಂಕನಾಡಿ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾರಿನಲ್ಲಿ ಬಂದು ನೇತ್ರಾವತಿ ಬ್ರಿಡ್ಜ್ ನ ಮೇಲ್ಸೇತುವೆಯಿಂದ ನದಿಗೆ ಕಸ ಬಿಸಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೀಡಿಯೋವೊಂದು ವೈರಲ್ ಆಗಿತ್ತು. ವೀಡಿಯೋದಲ್ಲಿ ಮಹಿಳೆಯೊಬ್ಬರು ನದಿಗೆ ಕಸ ಬಿಸಾಕುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿತ್ತು. KA03NB4648 ಸಂಖ್ಯೆಯ ಕಾರು ನೇತ್ರಾವತಿ ನದಿ ಸೇತುವೆ ಮೇಲೆ ನಿಲ್ಲಿಸಿ ಮಹಿಳೇಯೊಬ್ಬರು ಕಸ ಬಿಸಾಕುವ ಸಂದರ್ಭ ಅದರ ಹಿಂದಿನಿಂದ ಬಂದಿದ್ದ ಕಾರಿನವರು ವೀಡಿಯೋ ಮಾಡಿ ವೈರಲ್ ಮಾಡಿದ್ದರು. ನದಿಗೆ ಕಸ ಎಸೆದ ವಿಚಾರ ತೀವ್ರ ವಿರೋಧಕ್ಕೆ ಕಾರಣವಾಗಿತ್ತು.
ವೀಡಿಯೋದಲ್ಲಿದ್ದ ಕಾರಿನ ನೋಂದಣಿ ಸಂಖ್ಯೆಯ ಆಧಾರದಲ್ಲಿ ಪೊಲೀಸರು ತನಿಖೆ ಕೈಗೆತ್ತಿಕೊಂಡು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೂ ಕಾರಿನಲ್ಲಿದ್ದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.