ಕಾರ್ಕಳ, ಮೇ 01 (DaijiworldNews/MB) : ಕೊರೊನಾ ಹರುಡುವಿಕೆ ನಿಯಂತ್ರಿಸುವುದು ಹಾಗೂ ಸೋಂಕಿತರಿಗೆ ತುರ್ತು ಚಿಕಿತ್ಸೆಗೆ ಅಗತ್ಯವಾದ ಆಕ್ಸಿಜನ್ ಜನರೇಟರ್ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ಮಂಗಳೂರು ಎಂಸಿಎಫ್ ಸಂಸ್ಥೆಯ ನಿರ್ದೇಶಕ ಪ್ರಭಾಕರ್ ರಾವ್ ನೇತೃತ್ವದ ತಂಡವು ತಾಲೂಕು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಸಕ ವಿ.ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ಈ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಸಮಾಲೋಚನೆ ಸಭೆ ಆಯೋಜನೆಗೊಂಡಿತ್ತು. ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು ತುರ್ತು ಸೇವೆಗೆ ಸರ್ವ ಸನ್ನದ್ಧವಾಗಿ ಸುಸ್ಥಿಯಲ್ಲಿರಿಸಿದ್ದು, 10 ಐಸಿಯು ಮತ್ತು 60 ಆಮ್ಲಜನಕ ಸರಬರಾಜು ಸಹಿತ ಹಾಸಿಗೆಯನ್ನು ತಯಾರಿಸಲಾಗಿದೆ. ಯಾವುದೇ ರೋಗಿಗೂ ಆಕ್ಸಿಜನ್ ಕೊರತೆ ಆಗದಂತೆ ವ್ಯವಸ್ಥೆ ಮಾಡುವ ಸಲುವಾಗಿ ಮಂಗಳೂರಿನ ಎಂಸಿಎಫ್ ಸಂಸ್ಥೆಗೆ ಆಕ್ಸಿಜನ್ ಜನರೇಟರ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಲಾಗಿತ್ತು.
ಮನವಿಗೆ ಸ್ಪಂಧಿಸಿದ ಎಂಸಿಎಫ್ ಸಂಸ್ಥೆಯು ನಿರ್ದೇಶಕ ಪ್ರಭಾಕರ ರಾವ್ ತಾಲೂಕು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ತಕ್ಷಣವೇ ಆಕ್ಸಿಜನ್ ಜನರೇಟರ್ ಒದಗಿಸುವ ಬಗ್ಗೆ ಭರವಸೆಯನ್ನು ನೀಡಿರುತ್ತಾರೆ.
ಈ ಸಂಧರ್ಭದಲ್ಲಿ ಎಂ.ಸಿ.ಎಫ್ ಸಂಸ್ಥೆಯ ವೈಧ್ಯಾಧಿಕಾರಿಗಳಾದ ಡಾ. ಯೋಗಿಶ್, ಜನರಲ್ ಮ್ಯಾನೇಜರ್ ರಾಘವೇಂದ್ರ ಜಿ, ಡೆಪ್ಯುಟಿ ಜನರಲ್ ಮ್ಯಾನೇಜರ್ ಕೆ. ಬಿ ಕೀರ್ತನ್ ರಾವ್, ಎಲೆಕ್ರಟಿಕಲ್ ವಿಭಾಗದ ಚೀಫ್ ಮ್ಯಾನೇಜರ್ ಗೋಪಿ ಕೃಷ್ಣ ಜಿ, ತಾಲೂಕು ವೈಧ್ಯಾಧಿಕಾರಿಗಳಾದ ಕೃಷ್ಣಾನಂದ ಶೆಟ್ಟಿ, ಆಸ್ಪತ್ರೆಯ ಆಡಳಿತ ವೈಧಾಧಿಕಾರಿಗಳು ಕೆ.ಎಸ್.ರಾವ್, ಉಪಸ್ಥಿತರಿದ್ದರು.