ಉದ್ಯಾವರ,ಡಿ.15 (DaijiworldNews/HR): ಪ್ರಜಾಪ್ರಭುತ್ವ ವ್ಯವಸ್ಥೆಯ ತಳಪಾಯ ಇರೋದೆ ಗ್ರಾಮ ಪಂಚಾಯತ್ನಲ್ಲಿ ದೇಶದ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಗ್ರಾಮ ಪಂಚಾಯತ್ಗೆ ದೂರದೃಷ್ಠಿ ಇರುವ, ಅಭಿವೃದ್ಧಿಯ ಬಗ್ಗೆ ಕಲ್ಪನೆ ಇರುವ ಸಮರ್ಥ ಜನಪರ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಈ ಕುರಿತು ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, "ಮುಂಬರುವ ಗ್ರಾಮ ಪಂಚಾಯ ತ್ಚುನಾವಣೆಯಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಜನತೆಯ ಮೇಲಿದೆ. ಆ ಜವಾಬ್ದಾರಿಯನ್ನುಜನತೆ ಸಮರ್ಥವಾಗಿ ನಿಭಾಯಿಸ ಬೇಕಾಗಿದೆ. ಅದನ್ನು ನಾವು ಮಾಡಿ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ದಕ್ಕೆಬಾರದಂತೆ ಕಾಪಾಡುವಕರ್ತವ್ಯ ನಮ್ಮದಾಗಿದೆ" ಎಂದರು.
ಇನ್ನು "ಸರಕಾರ ತಂದಿರುವ ರೈತ ಸುಧಾರಣ ಮಸೂದೆ, ಎ.ಪಿ.ಎಂ.ಸಿ.ಕಾಯ್ದೆ ಇವೆಲ್ಲವೂ ಜನ ವಿರೋಧಿ ಕಾಯಿದೆಗಳು. ಸರಕಾರ ತಮ್ಮ ಸರ್ವಾಧಿಕಾರದ ದೋರಣೆಯನ್ನು ತೋರಿಸುತ್ತಿದೆ. ಈ ಮಸೂದೆಗಳನ್ನು ಜನತೆ ದಿಕ್ಕರಿಸಬೇಕಾಗಿದೆ. ಕೊರೊನಾ ಮಹಾಮಾರಿಯನ್ನು ನಿಭಾಯಸುವಲ್ಲಿ ಕೂಡಾ ಸರಕಾರ ಸೋತಿದೆ. ಸರಕಾರ ಇಂತಹ ವರ್ತನೆಯಿಂದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ" ಎಂದರು.
ಕಾಪು ಉತ್ತರ ಬ್ಲಾಕ್ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿ ಮಾತನಾಡಿ, "ಸದಾ ಜನ ಸೇವೆಯಲ್ಲಿ ತೊಡಗಿಕೊಂಡಿರುವ ಈ ಮಣ್ಣಿನ ಸೌಹಾರ್ದತೆಯನ್ನು ಕಾಪಾಡುವ ಜನಪ್ರತಿನಿಧಿಗಳನ್ನು ಗ್ರಾಮ ಪಂಚಾಯತ್ ಚುನಾವಣೆಯಲ್ಲಿಆಯ್ಕೆ ಮಾಡುವುದು ನಮ್ಮ ಜವಾಬ್ದಾರಿ ಆಗಲಿ" ಎಂದರು.