ಉಡುಪಿ, ಡಿ.15 (DaijiworldNews/HR): ಬೈರಂಪಳ್ಳಿ ಗ್ರಾಮ ಪಂಚಾಯತ್ನ ಭ್ರಷ್ಟಾಚಾರ ಮುಕ್ತ ಮಾಡುವುದು ಮತ್ತು ಸರ್ವತೋಮುಖ ಅಭಿವೃದ್ಧಿ, ಈ ಕಾರಣದಿಂದ 200 ಜನರ ಸ್ಥಾಯಿ ಸಮಿತಿ ಮತ್ತು 10 ಜನರ ಕೋರ್ ಕಮಿಟಿಯನ್ನು ರಚಿಸಿ ಪಕ್ಷ ರಹಿತವಾಗಿ ನಾನು ಹಾಗೂ ಯುವಕರ ತಂಡ ಸೇರಿ 13 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಈ ಹೋರಾಟಕ್ಕಾಗಿ ನಾಂದಿ ಇಟ್ಟಿದ್ದೇವೆ. ಆದ್ದರಿಂದ ತನ್ನನ್ನು ವಿಶ್ವ ಹಿಂದೂ ಪರಿಷತ್ ಮಂಗಳೂರಿನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ವಿಶ್ವ ಹಿಂದೂ ಪರಿಷತ್ತಿನ ಜವಾಬ್ದಾರಿಯಿಂದ ಮುಕ್ತ ಮಾಡಲಾಗಿದೆ ಎಂದು ಪ್ರಕಟಣೆ ಹೊರಡಿಸಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಉಡುಪಿ ಜಿಲ್ಲೆಯ ಮಾಜಿ ಉಪಾಧ್ಯಕ್ಷ, ಸಂಭಾವ್ಯ ಅಭ್ಯರ್ಥಿ ಸಂತೋಷ್ ಕುಮಾರ್ ಬೈರಂಪಳ್ಳಿ ಹೇಳಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, "ತಾನು ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷರಾಗಿರುವ ಸಮಯದಲ್ಲಿ ಸಂಘಟನೆಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಟ್ಟಿದ್ದು, ಹಾಗೆಯೇ ಬೈರಂಪಳ್ಳಿ ಗ್ರಾಮ, ಶೀರೂರು ಗ್ರಾಮ ಮತ್ತು ಬೆಳ್ಳರಪಾಡಿ ಗ್ರಾಮದಲ್ಲಿ ಸುಮಾರು ಆರು ವಿಶ್ವ ಹಿಂದೂ ಪರಿಷತ್ ಘಟಕವನ್ನು ಸ್ಥಾಪನೆ ಮಾಡಿರುವುದಾಗಿದೆ . ಆದರೆ ಈಗ ಗ್ರಾಮ ಪಂಚಾಯತ್ ಚುನಾವಣೆ ಸ್ಪರ್ಧಿಸಲು ನಿಂತಾಗ, ಶರಣ್ ಪಂಪ್ವೆಲ್ ಏಕಾಏಕಿ ಕರೆ ಮಾಡಿ ನೀವು ಸಂಘಟನೆಯಲ್ಲಿ ಇರುವಾಗ ನೀವು ಚುನಾವಣಾ ಹೇಳಿಕೆ ನೀಡಬಾರದು ಮತ್ತು ಅದರಿಂದ ಸಂಪೂರ್ಣ ಹಿಂದೆ ಬರಬೇಕು ಎಂದು ಹೇಳಿದಾಗ ನನ್ನ ನಿರ್ಧಾರ ನಮ್ಮ ಗ್ರಾಮದ ಸರ್ವತೋಮುಖ ಅಭಿವೃದ್ಧಿಯ ಪರವಾಗಿ ಇರುತ್ತದೆ ಎಂದು ಹೇಳಿರುತ್ತೇವೆ. ನಂತರ ಹಾಗಿದ್ದಲ್ಲಿ ನಿಮ್ಮನ್ನು ವಿಶ್ವ ಹಿಂದೂ ಪರಿಷತ್ನ ಜವಾಬ್ದಾರಿಯಿಂದ ನಾವು ಮುಕ್ತಗೊಳಲಿಸುತ್ತೇವೆ ಎಂದು ವಿಭಾಗ ಕಾರ್ಯದರ್ಶಿಗಳು ಹೇಳಿರುತ್ತಾರೆ" ಎಂದರು.
ಇನ್ನು ಕಳೆದ 30 ವರ್ಷಗಳಿಂದಲೂ ಬೈರಂಪಳ್ಳಿ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿಯೇ ಮೇಲು ಗೈ ಸಾಧಿಸುತ್ತ ಬಂದಿದೆ. ಗ್ರಾಮ ಪಂಚಾಯತ್ ಚುನಾವಣೆ ಕೇವಲ ವ್ಯಕ್ತಿ ಆಧಾರಿತ ಚುನಾವಣೆ , ಇದರಲ್ಲಿ ಯಾವುದೇ ಪಕ್ಷಗಳು ಬರುವುದಿಲ್ಲ. ಆದರೆ ನಮ್ಮ ಬೈರಂಪಳ್ಳಿಯ ಕೆಲವು ನಾಯಕರು ಸೇರಿ ಸಂಘಟನೆಯನ್ನು ಮುರಿಯುವ ಉದ್ದೇಶದಿಂದ ಮತ್ತು ತಮ್ಮ ಭ್ರಷ್ಟಾಚಾರದ ಭದ್ರಕೋಟೆ ಒಡೆಯುತ್ತದೆ ಎಂಬ ಭಯದಿಂದ ರಾಜಕೀಯ ಪಕ್ಷದ ಜಿಲ್ಲಾ ಧುರೀಣರನ್ನು ಬಳಸಿಕೊಂಡು ನನ್ನನ್ನು ವಜಾ ಮಾಡಿರುತ್ತಾರೆ" ಎಂದು ಹೇಳಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಸುಕೇಶ್ , ಶಿಲ್ಪ, ರತ್ನಾವತಿ, ಪವಿತ್ರ ಪೂಜಾರಿ, ಪ್ರಶಾಂತ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.